ಕಾಫಿ ನಾಡಿನ ಕೆಲವು ಭಾಗಗಳಲ್ಲಿ ಎರಡು ದಿನವು ಗುಡುಗು ಸಹಿತ ಮಳೆ.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸತತವಾಗಿ ಎರಡು ದಿನವೂ ಗುಡುಗು ಸಹಿತ ಭರ್ಜರಿ ಮಳೆಯಾಗಿದೆ. ರೈತರ ಮೊಗದಲ್ಲಿ ಮಂದಹಾಸ.
ಕಾಫಿ ನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು ಎರಡು ದಿನವೂ ಸುರಿದ ಗಾಳಿ ಗುಡುಗು ಮಿಂಚು ಮಿಂಚಿನೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ನರಸಿಂಹರಾಜಪುರ ಬಾಳೆಹೊನ್ನೂರು ಭಾಗಗಳಲ್ಲಿ ತಂಪೆರೆದ ಮಳೆ. ಬೇಸಿಗೆಯಿಂದ ತತ್ತರಿಸಿದ್ದ ಜನರಿಗೆ ವರುಣರಾಯ ತಂಪೆರೆದಿದ್ದಾನೆ.
2:30 ರ ಸಮಯಕ್ಕೆ ಕಪ್ಪು ಮೋಡ ಕವಿದ ವಾತಾವರಣ ಉಂಟಾಗಿ ಗಾಳಿ ಗುಡುಗು ಸಹಿತ ಮಳೆ ಸುರಿದಿದೆ. ಕಾಫಿ ಅಡಿಕೆ ಬೆಳೆಗಾರರ ಬೆಳೆಯು ಬಿಸಿಲಿನಿಂದ ಒಣಗುತ್ತಿದ್ದು ಮಳೆ ಬಂದಿದ್ದುರೈ ತರಿಗೆ ಸಂತೋಷ ತಂದಿದೆ.