ನ್ಯೂಸ್ಶಿವಮೊಗ್ಗ

ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು.

ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು.

(SHIVAMOGA): ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ಆನಂದಪುರದಿಂದ ಶಿಕಾರಿಪುರ ಕಡೆ ಚಲಿಸುತ್ತಿದ್ದ ಅಶೋಕ್ ಲೈಲ್ಯಾಂಡ್ ಹಾಗೂ ಟಿವಿಎಸ್ ಎಕ್ಸೆಲ್ ಬೆಳಂದೂರಿನಿಂದ ಆನಂದಪುರ ಕಡೆ ಬರುವ ಸಂದರ್ಭದಲ್ಲಿ ಗೌತಮಪುರದ ಮಾರಿಕಾಂಬ ದೇವಸ್ಥಾನದ ಮುಂಭಾಗ ರಸ್ತೆಯ ತಿರುವಿನ ಬಳಿ ಎರಡು ವಾಹನಗಳ ನಡೆದ ಭೀಕರ ಅಪಘಾತ ನಡೆದಿದೆ.

ಸ್ಥಳದಲ್ಲೇ ಎಕ್ಸೆಲ್ ಬೈಕ್ ಸವಾರರಾದ ಬೆಳಂದೂರಿನ ಗ್ರಾಮದ ವಾಸಪ್ಪ ( 70 )ಹಾಗೂ ಅವರ ಅಳಿಯ ಜಯನಗರ ವಾಸಿ ಆದ ಸತೀಶ್ ( 40 ) ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಸ್ಥಳಕ್ಕೆ ಆನಂದಪುರ 112 ಪೊಲೀಸ್ ಸಿಬ್ಬಂದಿಗಳು ತಕ್ಷಣ ಬೇಟಿ ನೀಡಿ ಸ್ಥಳೀಯ ಸಹಕಾರದೊಂದಿಗೆ ಮೃತದೇಹವನ್ನು ಆಂಬುಲೆನ್ಸ್ ಮುಖಾಂತರ ಸಾಗರ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆಯನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

Scan the code