ಸಾಗರದ ಪ್ರತಿಷ್ಠಿತ ಸಹಕಾರ ಸಂಸ್ಥೆ ಅಂಬ್ರೀಣಿ ವಿದ್ಯೇಶ ಸಹಕಾರ ಸಂಘ ನಿ.ಇದರ ಅಧ್ಯಕ್ಷರಾಗಿ ಯು.ಶಿವಾನಂದ ಭಂಡಾರ್ಕರ್ ಹಾಗೂ ಉಪಾಧ್ಯಕ್ಷರಾಗಿ ಜಿ.ಆರ್.ರಾಘವೇಂದ್ರ ಅವಿರೋಧವಾಗಿ ಆಯ್ಕೆ.
(SHIVAMOGA): ಸಾಗರದ ಪ್ರತಿಷ್ಠಿತ ಸಹಕಾರ ಸಂಸ್ಥೆ ಅಂಬ್ರೀಣಿ ವಿದ್ಯೇಶಿ ಕೋ ಆಪ್ ರೇಟೀವ್ ನಿ.ಇದರ ಅಧ್ಯಕ್ಷರಾಗಿ ಯು.ಶಿವಾನಂದ ಭಂಡಾರ್ಕರ್ ಹಾಗೂ ಉಪಾಧ್ಯಕ್ಷರಾಗಿ ಜಿ.ಆರ್.ರಾಘವೇಂದ್ರ ಅವಿರೋಧವಾಗಿ ಮುಂದಿನ 5ವರ್ಷಗಳವರಗೆ ಆಯ್ಕೆಯಾಗಿದ್ದಾರೆ.
ಹಾಗೂ ನಿರ್ದೇಶಕರಾಗಿ ಟಿ.ವಿ.ಪಾಂಡುರಂಗ, ಹೆಚ್.ವಿ.ಶಿವಪ್ರಕಾಶ್, ಜಿ.ಆರ್.ವಿಜಯಲಕ್ಷ್ಮೀ, ರಶ್ಮಿ ಹೆಚ್.ಎಸ್, ಪ್ರಿಯಾಂಕ ಎಸ್.ಪಿ,ಉಮಾ ಎಸ್.ಭಂಡಾರ್ಕರ್, ಪದ್ಮಜಾ ಎ.ಎಸ್, ಕಾರ್ತಿಕ್ ಎಸ್ ಭಂಡಾರ್ಕರ್,ಸುಮ ಎಸ್.ಡಿ, ರಾಧಕೃಷ್ಣ ಎನ್ ನಾಯಕ್,ಕರಿಬಸಪ್ಪ ಶಿವಳ್ಳಿ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದು ಸಂಘದ ಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ ಇವರನ್ನು ಆಯ್ಕೆಮಾಡಲಾಗಿದ್ದು ಯಾವುದೇ ಚುನಾವಣೆ ಇಲ್ಲದೆ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶಿವಪ್ರಕಾಶ್ ತಿಳಿಸಿದ್ದಾರೆ.
ಕಳೆದ 20 ವರ್ಷಗಳಿಂದ ಸಾಗರದಲ್ಲಿ ನಮ್ಮ ಸಂಸ್ಥೆಯು ಸಮಾಜಮುಖಿಯಾಗಿ ತೊಡಗಿಸಿಕೊಂಡು ಬಂದಿದೆ ಅನೇಕ ಷೇರಿದಾರರಿಗೆ ಆರ್ಥಿಕವಾಗಿ ಸಹಕಾರವನ್ನು ನೀಡುವ ಮೂಲಕ ಷೇರುದಾರರ ಹಿತ ಕಾಪಾಡುವಲ್ಲಿ ಹೆಚ್ಚಿನ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಗೆ ಬೇಕಾದ ಸ್ವಂತ ಕಛೇರಿ, ಹಾಗೂ ಶಾಖೆಗಳನ್ನು ತೆರೆಯುವ ಮೂಲಕ ಸಂಸ್ಥೆಯನ್ನು ಬೆಳಸಲಾಗುತ್ತದೆ ಎಂದು ನೂತನವಾಗಿ ಆಯ್ಕೆಯಾಗಿರುವ ಯು.ಎಸ್.ಭಂಡಾರ್ಕರ್ ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನೂತನ ಉಪಾಧ್ಯಕ್ಷರಾದ ಜಿ.ಆರ್.ರಾಘವೇಂದ್ರ, ಹೆಚ್.ವಿ.ಶಿವಪ್ರಕಾಶ್, ಕರಿಬಸಪ್ಪ ಶಿವಳ್ಳಿ ಕಾರ್ಯನಿರ್ವಹಣಾಧಿಕಾರಿ ಸುದೀಂದ್ರ ಮೊದಲಾದವರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ