ಜಿಲ್ಲೆನ್ಯೂಸ್

ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಜೇಸಿಐ ಸೊರಬ ಸಿಂಧೂರ ಘಟಕದ 2024ರ ಅಧ್ಯಕ್ಷರಾಗಿ ಉಮೇಶ್ ನಾಯಕ್ ಆಯ್ಕೆ

ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಜೇಸಿಐ ಸೊರಬ ಸಿಂಧೂರ ಘಟಕದ 2024ರ ಅಧ್ಯಕ್ಷರಾಗಿ ಉಮೇಶ್ ನಾಯಕ್ ಆಯ್ಕೆ


(SHIVAMOGA): ದೊಡ್ಡಮನೆ ರಾಮಪ್ಪ ಜುವೆಲ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ 2024ರ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು

ಚುನಾವಣಾ ಅಧಿಕಾರಿಯಾಗಿ ನಿಕಟ ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಇವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು ಮತ್ತು 2024ರ ಸೊರಬ ಸಿಂಧೂರ ಘಟಕದ ಅಧ್ಯಕ್ಷರಾಗಿ ಉಮೇಶ್ ನಾಯಕ್ , ಕಾರ್ಯದರ್ಶಿಯಾಗಿ ಸುಮಾ ಮಧು, ಮತ್ತು ಮಕ್ಕಳ ವಿಭಾಗದ ಅಧ್ಯಕ್ಷರಾಗಿ ಚೇತನ್ ಸ್ವಾಮಿ ಹಿರೇಮಠ ಇವರು ಆಯ್ಕೆಯಾಗಿರುತ್ತಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜೆಸಿಐ ಸೊರಬ ಸಿಂಧೂರ ಘಟಕ ಈಗಾಗಲೇ
ಸೊರಬದಲ್ಲಿ ಹಲವಾರು ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದು ಶಾಲೆಗಳನ್ನ ದತ್ತು ಪಡೆದು ಗಿಡಗಳನ್ನು ನೆಡುವ ಕಾರ್ಯಕ್ರಮ , ರಕ್ತದಾನ ಶಿಬಿರ , ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು ಎನ್ನುವ ತರಬೇತಿ ಕಾರ್ಯಕ್ರಮ ಯುವ ಸಬಲೀಕರಣ ಹಾಗೂ ಸ್ತ್ರೀ ಸಬಲೀಕರಣಕ್ಕೆ ತರಬೇತಿ ಕಾರ್ಯಕ್ರಮಗಳು, ಬಿ.ಪಿ ಮತ್ತು ಶುಗರ್ ತಪಾಸಣಾ ಕಾರ್ಯಕ್ರಮ,
ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ,
ಸಮಾಜದಲ್ಲಿ ಎಲೆಮರೆಕಾಯಿಯಂತೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವವರನ್ನು ಮುಖ್ಯ ವಾಹಿನಿಗೆ ತರುವಂತೆ ಅವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ
ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನ ಮಾಡುವುದರ ಮೂಲಕ ಸೊರಬದ ಜನತೆಯಲ್ಲಿ ಉತ್ತಮ ವಿಶ್ವಾಸವನ್ನು ಗಳಿಸಿಕೊಂಡಿದೆ ಎಂದು ಜೆಸಿಐ ಭಾರತದ ಹಸಿರಿಕರಣ ವಿಭಾಗದ ಪೂರ್ವ ರಾಷ್ಟ್ರೀಯ ಸಂಯೋಜಕರಾದ ಪ್ರಶಾಂತ್ ದೊಡ್ಡಮನೆ ತಿಳಿಸಿದರು.

ಯುವಕರು ಉತ್ತಮ ನಾಯಕರಾಗಲು ಮತ್ತು ಉತ್ತಮ ಭಾಷಣಕಾರರಾಗಲು ಹಾಗೂ ತರಬೇತುದಾರರಾಗಲು ಜೆಸಿಐ ಒಂದು ಉತ್ತಮ ವೇದಿಕೆಯಾಗಿದೆ ಎಂದು ಸೀನಿಯರ್ ಮೆಂಬರ್ ಅಸೋಸಿಯೇಷನ್ ನಿರ್ದೇಶಕರಾದ ಕೃಷ್ಣಾನಂದ ಇವರು ತಿಳಿಸಿದರು,

ಜೆ ಸಿ ಐ ಸೊರಬ ಸಿಂಧೂರ ಘಟಕದ ಹಲವಾರು ಕಾರ್ಯಕ್ರಮಗಳು ಯುವಕರಿಗೆ ಮಾದರಿಯಾಗಿದೆ ಮತ್ತು ಇನ್ನೂ ಹೆಚ್ಚಿನ ಕೆಲಸಗಳು ತಮ್ಮ ಸಂಸ್ಥೆಯಿಂದ ಆಗಲಿ ಎಂದು ಪದಾಧಿಕಾರಿಗಳಿಗೆ ಉಮೇಶ್ ಪ್ರಾಧ್ಯಾಪಕರು ಅಭಿನಂದಿಸಿದರು,

ಈ ಕಾರ್ಯಕ್ರಮದಲ್ಲಿ ಜೆ ಸಿ ಐ ಸೊರಬ ಸಿಂಧೂರ ಘಟಕದ ಸ್ಥಾಪಕ ಅಧ್ಯಕ್ಷರಾದ ಪೂಜಾ ಪ್ರಶಾಂತ್ ದೊಡ್ಡಮನೆ, ಗೌರವಾಧ್ಯಕ್ಷರಾದ ಸವಿತಾ .ಎಂ. ಕೆ. ಭಟ್ , ಪೂರ್ವ ಅಧ್ಯಕ್ಷರಾದ ಶಿವಕುಮಾರ್ ನಾಯಕ್, ನಿರ್ದೇಶಕರಾದ ಸರಸ್ವತಿ ನಾವಡ ,ನಿರ್ದೇಶಕ ಮಹೇಶ್ ಕಾರ್ವಿ, ಮಾಲತೇಶ್ ಸಿದ್ದಲಿಂಗ ಸ್ವಾಮಿ ಚೇತನ್, ಚಂದ್ರಶೇಖರ್, ಶಿವರಾಜ್ ಮುಂತಾದವರು ಉಪಸ್ಥಿತರಿದ್ದರು,

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code