ಜಿಲ್ಲೆನ್ಯೂಸ್

ಕೆರೆಯಲ್ಲಿ ವ್ಯಕ್ತಿಯ ಮೃತ ದೇಹಕ್ಕಾಗಿ ಕತ್ತಲಲ್ಲಿ ಕಾರ್ಯಾಚರಣೆ

ಕೆರೆಯಲ್ಲಿ ವ್ಯಕ್ತಿಯ ಮೃತ ದೇಹಕ್ಕಾಗಿ ಕತ್ತಲಲ್ಲಿ ಕಾರ್ಯಾಚರಣೆ


(KOLARA): ಬಂಗಾರಪೇಟೆ: ಕೆರೆಯಲ್ಲಿ ಈಜಲು ಹೋಗಿದ್ದ ವ್ಯಕ್ತಿಯೋರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಪಟ್ಟಣಕ್ಕೆ ಸಮೀಪ ಇರುವ ದೇಶಿಹಳ್ಳಿ ಗ್ರಾಮದ ಕೆರೆಯಲ್ಲಿ ಘಟನೆ ನಡೆದಿದೆ.

ಮೃತಪಟ್ಟ ಯುವಕನನ್ನು ದೇಶಿಹಳ್ಳಿ ನಿವಾಸಿ ಸುಬ್ರಮಣಿ 35 ವರ್ಷ ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ 5:30 ನಿಮಿಷದಲ್ಲಿ ಕೆರೆ ದಡದಲ್ಲಿ ಬಟ್ಟೆಗಳನ್ನು ಬಿಚ್ಚಿ ಈಜು ಹೊಡೆಯಲು ಕೆರೆಯೊಳಗೆ ಇಳಿದಿದ್ದಾನೆ. ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಬರಲು ಪ್ರಯತ್ನಿಸಿದಾಗ ಆಯಾಸಗೊಂಡು ನೀರಿನ ಒಳಗಡೆ ಮುಳುಗಿ ಸಾವನಪ್ಪಿದ್ದಾನೆ.

ಅದೇ ಸಮಯದಲ್ಲಿ ಮೃತನ ಸಹೋದರ ಪಕ್ಕದಲ್ಲಿ ಮೀನು ಹಿಡಿಯುತ್ತಿದ್ದು ತನ್ನ ಸಹೋದರ ಬಾರದೇ ಇರುವುದನ್ನು ಗಮನಿಸಿ ದಡಕ್ಕೆ ಬಂದು ನೋಡಿದಾಗ ಸುಬ್ರಮಣಿ ಕರೆ ಮಧ್ಯ ಭಾಗದಲ್ಲಿ ಇರುವುದನ್ನು ಗಮನಿಸಿ ವಾಪಸ್ಸು ಬರುವಂತೆ ಹೇಳುತ್ತಿದ್ದ ಆದರೆ ಆತ ಮುಂದಿನ ದಡಕ್ಕೆ ಹೋಗಲೇಬೇಕು ಎಂದು ಹಠ ಹಿಡಿದು ಈಜುಕೊಂಡು ಬರುವಾಗ ಆಯಾಸಗೊಂಡು ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ.

ತಕ್ಷಣ ಆತನ ಸಹೋದರ ಸಂಬಂಧಿಗಳಿಗೆ ಹಾಗೂ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ಘಟನೆ ನಡೆದ ಕೆರೆ ಹಾಳ ಸುಮಾರು ಸುಮಾರು 60 ಅಡಿ ತಿಳಿದು ಬಂದಿದೆ. ವಿಷಯ ತಿಳಿದ ತಕ್ಷಣ ಸಬ್ ಇನ್ಸ್ಪೆಕ್ಟರ್ ರಾಜಣ್ಣ ನೇತೃತ್ವದಲ್ಲಿ ಸಿಬ್ಬಂದಿ ಎಸ್ ಬಿ ನಾಗೇಶ್ ಹಾಗೂ ಮಂಜುನಾಥ್ ಆಗಮಿಸಿದ್ದಾರೆ.

ನಂತರ ತಕ್ಷಣ ಅಗ್ನಿಶಾಮಕ ದಳಕ್ಕೆ ದೂರವಾಣಿ ಮುಖಾಂತರ ಸಂಪರ್ಕಿಸಿ ಸಿಬ್ಬಂದಿಯನ್ನು ಕರೆಸಿದ್ದಾರೆ. ಸ್ಥಳದಲ್ಲಿ ದಟ್ಟನೆ ಕತ್ತಲಿದ್ದ ಕಾರಣ ಕೆರೆಯಲ್ಲಿ ಇಳಿಯಲು ಅಸಾಧ್ಯವಾದ ಕಾರಣ ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಟಾಧಿಕಾರಿ ಶಾಂತರಾಜ್ ಅವರ ಗಮನಕ್ಕೆ ಸಿಬ್ಬಂದಿ ತಂದಾಗ ಅಧಿಕಾರಿ ಸೂಚನೆಯಂತೆ ಆಸ್ಕ ಲೈಟ್ ಉಪಯೋಗಿಸಿ ಕೆರೆಯಲ್ಲಿ ಮೃತ ದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಈ ಮಧ್ಯೆ ಅಗ್ನಿಶಾಮಕ ದಳ ಸಿಬ್ಬಂದಿ ತೆಪ್ಪದೊಂದಿಗೆ ಪಾತಾಳ ಭೈರವಿ ಮುಖಾಂತರ ನೀರಿನಲ್ಲಿ ಮೃತದೇಹ ಪತ್ತೆಗಾಗಿ ಜಾಲಾಡಿದರು.ಆದರೂ ಸಹ ಬಾರಿ ಆಳ ಇರುವ ಕಾರಣ ಮೃತ ದೇಹವನ್ನು ಹೊರತರಲು ಅರಸಹಾಸ ನಡೆಸುತ್ತಿದ್ದಾರೆ.

ಈ ಘಟನೆ ಬಂಗಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code