ಕೇಂದ್ರದ NDA ಸಚಿವರಾದ H.D ಕುಮಾರಸ್ವಾಮಿ ಈ ಕೂಡಲೇ ರಾಜೀನಾಮೆ ನೀಡಬೇಕು.
(KOLARA): ಬಂಗಾರಪೇಟೆ: ಅಕ್ರಮ ಭೂ ಕಬಳಿಗೆ, ಡಿನೋಟಿಪಿಕೇಷನ್ ಆರೋಪದಡಿ FIR ದಾಖಲಾಗಿರುವ ಕೇಂದ್ರದ NDA ಸಚಿವರಾದ H.D ಕುಮಾರಸ್ವಾಮಿ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಮಾಧ್ಯಮ ವಕ್ತಾರ ಅ.ನಾ ಹರೀಶ್ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋಲಾರ ಸಂಸದರಾದ ಎಂ. ಮಲ್ಲೇಶ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿರುವುದನ್ನು ಖಂಡಿಸುತ್ತಾ, ಜೆಡಿಎಸ್ ಪಕ್ಷದ ಮಂತ್ರಿಗಳ ರಾಜೀನಾಮೆಯನ್ನು ಕೊಡಿಸಿ ಎಂದರು.
ಜೆಡಿಎಸ್ ನ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ದ 50 ಕೋಟಿ ಹಣ ಬೇಡಿಕೆಯ ಆರೋಪ, ಕುಟುಂಬದ ಸದಸ್ಯರಿಗೆ ಸರ್ಕಾರದ ಜಮೀನನ್ನು ಬೇನಾಮಿಯಾಗಿ ಆಸ್ತಿಯನ್ನು ಮಾಡಿರುವುದು ಹಾಗೂ ಲೋಕಾಯುಕ್ತದಲ್ಲಿ ದಾಖಲಾಗಿರುವ ದೂರುಗಳಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆಯನ್ನು ಸಂಸದರಾದ ಎಂ.ಮಲ್ಲೇಶ್ ಬಾಬು ಅವರು ಕುಮಾರಸ್ವಾಮಿ ಅವರಿಂದ ಕೊಡಿಸಲಿ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕೋಲಾರ ಸಂಸದರಿಗೆ ಇಲ್ಲ, ಸಿದ್ದರಾಮಯ್ಯ ಅವರು ಜಾತ್ಯಾತೀತ, ಹಿಂದುಳಿದ, ಅಲ್ಪಸಂಖ್ಯಾತ, ದಲಿತರ, ಅಹಿಂದ ನಾಯಕರಾಗಿರುವ ಇವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದ್ದಾರೆ.
ಕೇಂದ್ರದ NDA ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ರಾಜೀನಾಮೆ ಯಾವಾಗ? ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ನವೀನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಚುನಾವಣಾ ಬಾಂಡ್ ಗಳ ಹೆಸರಲ್ಲಿ 8 ಸಾವಿರ ಕೋಟಿ ಕಾನೂನು ಬಾಹೀರವಾಗಿ ವಸೂಲಿ ಮಾಡಿದ್ದು, ಅವರ ವಿರುದ್ದ FIR ದಾಖಲಾಗಿದೆ ಇವರ ರಾಜೀನಾಮೆ ಮತ್ತು ಬಂಧನ ಯಾವಾಗ ಎಂದು ಪ್ರಶ್ನಿಸಿದರು.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್ ವಿಜಯೇಂದ್ರ ಅವರು ಬಿಜೆಪಿ ಸರ್ಕಾರ ಅವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗ ಚೆಕ್ಕುಗಳ ಮುಖಾಂತರ ಭ್ರಷ್ಟಾಚಾರ ಮಾಡಿದ್ದಾರೆ ಇವರ ಮೇಲು ತನಿಖೆ ನಡೆಸಿ FIR ದಾಖಲಿಸಬೇಕಿದೆ.
ಕೋವಿಡ್ ಹಗರಣದಲ್ಲಿ ನೇರಭಾಗಿಯಾಗಿರುವ ಕೇಂದ್ರದ NDA ಸಂಸದರಾದ ಡಾ ಸುಧಾಕರ್ ಅವರ ವಿರುದ್ದ SIT ತನಿಖೆ ನಡೆಸಿ ದೂರು ದಾಖಲಿಸಿಕೊಂಡ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಬಿಜೆಪಿಯ ವಿಪಕ್ಷನಾಯಕ ಆರ್ ಅಶೋಕ್ ಅವರ ಮೇಲೆ ಸಾವಿರಾರು ಕೋಟಿ, ಅಕ್ರಮ ಹಣ ಭ್ರಷ್ಟಾಚಾರ, ಸರ್ಕಾರಿ ಭೂ ಹಗರಣ, ಬಿಬಿಎಂಪಿ ವ್ಯಾಪ್ತಿಯ ಭೂ ಹಗರಣಗಳು ಮಾಡಿರುವ ಬಗ್ಗೆ ದಾಖಲೆ ಸಮೇತ ಇದ್ದರೂ ಬಿಜೆಪಿ ಯಾಕೆ ಆರ್ ಅಶೋಕ್ ಅವರ ರಾಜೀನಾಮೆ ಕೇಳುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಪ್ರಶ್ನೆ ಮಾಡಿದರು.
ನಿಮ್ಮ ಬಿಜೆಪಿ ಪಕ್ಷಕ್ಕೆ ನೈತಿಕತೆ ಇದ್ದರೆ ಮೊದಲು ನಿಮ್ಮ ಶಾಸಕರು, ಮಾಜಿ ಮಂತ್ರಿಗಳು ಮಾಡಿರುವ ಭ್ರಷ್ಟಾಚಾರಗಳನ್ನು ಬಯಲಿಗೆ ತಂದು ಅವರನ್ನ ಮೊದಲು ಜೈಲಿಗೆ ಹಾಕಿಸಿ, ನಂತರ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿ ಎಂದಿದ್ದಾರೆ.