ಹೆಣ್ಣುಮಕ್ಕಳು ಹೆಚ್ಚು ರಕ್ತದಾನ ಮಾಡುವ ಮೂಲಕ ಅನಗತ್ಯ ಕೊಲೆಸ್ಟ್ರಾಲ್ ದೂರವಾಗುವುದು.
(SHIVAMOGA ): ಸೊರಬ: ಹೆಣ್ಣುಮಕ್ಕಳು ಹೆಚ್ಚು ರಕ್ತದಾನ ಮಾಡುವ ಮೂಲಕ ಅನಗತ್ಯ ಕೊಲೆಸ್ಟ್ರಾಲ್, ಹಾರ್ಮೋನ್ ಏರುಪೇರು ಮುಂತಾದ ಸಮಸ್ಯೆಗಳಿಂದ ದೂರವುಳಿಯ ಬಹುದು. ನಿಯಮಿತ ರಕ್ತದಾನ ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ ಎಂದು ರಕ್ತದಾನದ ಮಹತ್ವ ಕುರಿತು ರೋಟರಿ ರೆಡ್ ಕ್ರಾಸ್ ರಕ್ತ ಕೇಂದ್ರ ಸಾಗರದ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು
ವಿವರಿಸಿದರು
ತಾಲ್ಲೂಕು ಹೊಸಬಾಳೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು. ರಕ್ತದಾನ ಶಿಬಿರದ ಮಹತ್ವವನ್ನು ದಂತವೈದ್ಯ ಡಾ. ಜ್ಞಾನೇಶ್ ತಿಳಿಸಿದರು.
ಯಾರು ರಕ್ತದಾನ ಮಾಡಬಹುದು ಹಾಗೂ ರಕ್ತದಾನದ ಪ್ರಯೋಜನದ ಬಗೆಗೆ ತಾಲೂಕು ಆರೋಗ್ಯಾಧಿಕಾರಿ ಡಾ. ವಿನಯ ಪಾಟೀಲ್ ಮಾಹಿತಿ ನೀಡಿದರು.
ಆಪ್ಯಂ ಆಯುರ್ವೇದ ಪ್ರತಿಷ್ಠಾನ ಅಧ್ಯಕ್ಷ ಸಾಗರದ ಡಾ. ನಿರಂಜನ ಹೆಗಡೆ ರೋಟರಿ ರಕ್ತ ಕೇಂದ್ರದ ಬಗ್ಗೆ ವಿವರಿಸಿದರು.
ಮುಂದಿನ ದಿನಗಳಲ್ಲಿ ಹಠಾತ್ ಹೃದಯ ಸ್ತಂಭನದ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯ ತರಬೇತಿಯನ್ನು ಶಿವಾಜಿ ಬಳಗ ಹೊಸಬಾಳೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳುವ ಆಶಯ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯ್ತಿ ಹೊಸಬಾಳೆ, ಶಿವಾಜಿ ಬಳಗ ಹೊಸಬಾಳೆ,
ಆಪ್ಯಂ ಆಯುರ್ವೇದ ಪ್ರತಿಷ್ಠಾನ ಸಾಗರ, ರೋಟರಿ ರೆಡ್ ಕ್ರಾಸ್ ರಕ್ತ ಕೇಂದ್ರ ಉಪವಿಭಾಗೀಯ ಆಸ್ಪತ್ರೆ ಸಾಗರ, ಹೊಸಬಾಳೆ ಗ್ರಾಮಸ್ಥರ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 41 ಜನ ರಕ್ತದಾನ ಮಾಡಿದರು.
ಹೊಸಬಾಳೆ ಪಿಎಚ್ಸಿ ವೈದ್ಯಾಧಿಕಾರಿ ಡಾ. ಮಹಾದೇವ ಪವಾರ್, ರೋಟರಿ ರೆಡ್ ಕ್ರಾಸ್ ರಕ್ತ ಕೇಂದ್ರ ಸಾಗರದ ಡಾ. ಸಚಿನ್, ನಿವೃತ್ತ ಅಂಚೆ ಇಲಾಖೆ ನೌಕರ ನಾಗರಾಜ ಭಟ್, ಮತ್ತಿತರರಿದ್ದರು.
ವರದಿ: ಮಧು ರಾಮ್ ಸೊರಬ