ಸಂಪರ್ಕಕ್ಕೆ ಸಿಗದ ಜನಸಂಪರ್ಕ ಕಾರ್ಯಕ್ರಮ.
(KOLARA): ಭ್ರಷ್ಠಾಚಾರದ ಕೂಪದಲ್ಲಿ ಮಿಂದು ಬೆಂದು ನಲುಗಿ ಹೋಗಿದ್ದ ಜನತೆಗೆ ಆಸರೆಯಾಗಬೇಕಾಗಿದ್ದ ಜನಸಂಪರ್ಕ ಕಾರ್ಯಕ್ರಮ ಪ್ರಚಾರದ ಕೊರತೆಯಿಂದಾಗಿ ಜನರ ಸಂಪರ್ಕಕ್ಕೆ ಸಿಗದೇ ಕಾರ್ಯಕ್ರಮ ಮುಕ್ತಾಯಗೊಂಡ ಪ್ರಸಂಗ ನಡೆಯಿತು.
ಬಂಗಾರಪೇಟೆ: ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೋಲಾರ ಲೋಕಾಯುಕ್ತ ಇಲಾಖೆ ವತಿಯಿಂದ ಜನಸಂಪರ್ಕ ಕಾರ್ಯಕ್ರಮ ಎಂಬ ಶೀರ್ಷಿಕೆಯಡಿಯಲ್ಲಿ ತಾಲ್ಲೂಕು ಮಟ್ಟದ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆಯನ್ನು ಏರ್ಪಡಿಸಲಾಗಿತ್ತು. ತಾಲ್ಲೂಕಿನಲ್ಲಿ ಪುರಸಭೆಯನ್ನು ಒಳಗೊಂಡ 21 ಗ್ರಾ.ಪಂಗಳಿಗೆ ಪ್ರತಿನಿತ್ಯ ಗ್ರಾಮಸ್ಥರು ಹಲವಾರು ಸಮಸ್ಯೆಗಳನ್ನು ಹೊತ್ತು ಸರ್ಕಾರಿ ಕಛೇರಿಗಳಿಗೆ ಅಲೆದಾಡುತ್ತಿದ್ದಾರೆ. ಈ ನಡುವೆ ಬಹುತೇಕ ಇಲಾಖೆಗಳಲ್ಲಿ ನಿಗಧಿತ ಸಮಯಕ್ಕೆ ಕೆಲಸಗಳು ನಡೆಯುತ್ತಿಲ್ಲ. ಮಧ್ಯವರ್ತಿಗಳ ಹಣದಾಹ ಬೆರಳೆಣಿಕೆ ಅಧಿಕಾರಿಗಳ ಭ್ರಷ್ಠಾಚಾರದಿಂದ ಸೋತು ಸುಣ್ಣವಾಗಿ ಅಂದಕಾರದಲ್ಲಿ ಮುಳುಗಿ ನ್ಯಾಯದ ಬೆಳಕಿಗಾಗಿ ಪರಿತಪಿಸುವ ಜನತೆಗೆ ಲೋಕಾಯುಕ್ತರ ಜನಸಂಪರ್ಕ ಕಾರ್ಯಕ್ರಮ ವೇದಿಕೆಯಾಗಬೇಕಾಗಿತ್ತು. ವಿಪರ್ಯಾಸ ಸಾರ್ವಜನಿಕರಿಗೆ ಮಾಹಿತಿಯ ಕೊರತೆಯಿಂದ ನಿರಸ ಪ್ರತಿಕ್ರಿಯೆಯ ಮೂಲಕ ಅಂತ್ಯವಾಯಿತು.
ಈ ನಡುವೆ ಮಾದ್ಯಮ ಹೇಳಿಕೆ ನೀಡಿದ ಲೋಕಾಯುಕ್ತ ಅಧೀಕ್ಷಕ ಉಮೇಶ್ ಪ್ರತಿ ತಿಂಗಳ ಎರಡನೇ ಬುಧವಾರದಂದು ಸಾರ್ವಜನಿಕರ ಕುಂದು ಕೊರತೆಗಳ ಅಹವಾಲು ಸ್ವೀಕಾರ ಸಭೆಯನ್ನು ಆಯೋಜಿಸಲಾಗುವುದು, ಇಂದು ಬಂಗಾರಪೇಟೆ ತಾಲ್ಲೂಕಿನ ಕಾರ್ಯಕ್ರಮದಲ್ಲಿ ಪುರಸಭೆ ವ್ಯಾಪ್ತಿಯ 3, ಕಂದಾಯ ಇಲಾಖೆ 4, ಪಂಚಾಯಿತಿ ರಾಜ್ ಇಲಾಖೆ ಕೋಲಾರ 2, ತಾಲ್ಲೂಕು ಪಂಚಾಯಿತಿ 4, ಒಳಗೊಂಡoತೆ ಒಟ್ಟು 22 ದೂರುಗಳನ್ನು ಸ್ವೀಕರಿಸಲಾಗಿದೆ. ಆರ್ಡಿಪಿಆರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಬಹಳ ದಿನಗಳಿಂದ ಕರ್ತವ್ಯ ನಿರ್ವಹಿಸಿರುವುದಿಲ್ಲ ಎಂಬ ಗುರುತರ ಆರೋಪ ಬಂದಿದ್ದು, ಫಾರಂ-1 ಮತ್ತು 2ರಲ್ಲಿ ದೂರನ್ನು ಸ್ವೀಕರಿಸಿ ಕರ್ನಾಟಕ ಲೋಕಾಯುಕ್ತಕ್ಕೆ ಕಳುಹಿಸಲಾಗುವುದು.
ಉಳಿದಂತಹ ದೂರುಗಳಿಗೆ ಸಂಬoಧಿಸಿದoತೆ ಒಂದು ತಿಂಗಳ ಒಳಗಾಗಿ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಲಾಗುವುದು ಒಂದು ವೇಳೆ ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದಲ್ಲಿ ಕರ್ನಾಟಕ ಲೋಕಾಯುಕ್ತ ಪ್ರಕರಣವನ್ನು ಕಳುಹಿಸಲಾಗುವುದು ಎಂದರು. ಕಳೆದ ಭಾರಿ ಬಂದ 2೦ ಅರ್ಜಿಗಳು, 17 ಅರ್ಜಿಗಳಿಗೆ ಸಂಬoಧಿಸುವoತೆ ಎಚ್ಚರಿಕೆ ನೀಡಲಾಗಿದೆ ಎಂದರು. ಹಾಗೂ ಸದರಿ ಕಾರ್ಯಕ್ರಮಕ್ಕೆ ಸಂಬoಧಿಸಿದoತೆ ತಾಲ್ಲೂಕು ಕಛೇರಿ ಪುರಸಭೆ ಕಛೇಯ ಬಳಿ ಬ್ಯಾನರ್ ಹಾಕಲಾಗಿದೆ ಮತ್ತು ಒಂದು ವಾರದ್ ಮುಂಚಿತವಾಗಿ ಪತ್ರಿಕಾ ಹೇಳಿಕೆ ನೀಡಲಾಗಿದೆ. ಇದರೊಟ್ಟಿಗೆ ಬಹುತೇಕ ಕೋಲಾರದ ಕಛೇರಿಗೆ ನೇರವಾಗಿ ಸಂಪರ್ಕಿಸಿ ತಮ್ಮ ಅಹವಾಲು ನೀಡುವುದರಿಂದ ಪ್ರಸ್ತುತ ಕಾರ್ಯಕ್ರಮಕ್ಕೆ ಜನರ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ ಎಂದು ತಿಳಿಸಿದರು.
ತಂತ್ರಗಾರಿಕೆ ಯಶಸ್ವಿ, ಅಧಿಕಾರಿಗಳು ಪಾರು:
ಗ್ರಾಮೀಣ ಭಾಗದಲ್ಲಿ ಅಕ್ರಮ ಒತ್ತುವರಿ ನಕಲಿ ದಾಖಲೆ ಸೃಷ್ಠಿ ಅಕ್ರಮ ಖಾತೆ, ಸುಳ್ಳು ದೂರುಗಳನ್ನು ಒಳಗೊಂಡoತೆ ಅಧಿಕಾರಿಗಳ ವಿರುದ್ದ ದೂರುಗಳ ಸುರಿಮಳೆಯಿದೆ. ಆದರೆ ಅಧಿಕಾರಿಗಳ ತಮ್ಮ ಚಾಣಕ್ಷತನದಿಂದ ಗ್ರಾಮೀಣ ಭಾಗದ ಜನರಿಗೆ ಇಂದಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡದೆ ತಮ್ಮ ವಿರುದ್ದ ಬರಬಹುದಾದ ಆರೋಪಗಳಿಂದ ಮುಕ್ತರಾಗಿದ್ದಾರೆ, ಎನ್ನಬಹುದು.
ಈ ಸಂದರ್ಭದಲ್ಲಿ ಲೋಕಾಯುಕ್ತ ವೃತ್ತ ನಿರೀಕ್ಷಕ ಆಂಜನಪ್ಪ, ಸಿಬ್ಬಂದಿಗಳಾದ ರಾಮಚಂದ್ರ, ಶ್ರೀನಿವಾಸ್, ನಾಗವೇಣಿ, ತಹಸೀಲ್ದಾರ್ ರಶ್ಮಿ, ಇಓ ರವಿಕುಮಾರ್, ಸಿಓ ಮಿನಾಕ್ಷಿ, ಅಕ್ಷರ ದಾಸೋಹ ನಿರ್ದೇಶಕ ಯುವರಾಜು, ಪಿಡಿಓ ಸಂಘದ ಅಧ್ಯಕ್ಷ ಪಿ.ನಾರಾಯಣಪ್ಪ, ಪಿಡಿಓಗಳಾದ ಮಧುಚಂದ್ರ, ಚಿತ್ರಾ, ವಾಣಿ, ವೇಣು, ವಸಂತ್, ಶಂಕರ್, ಸರಸ್ವತಿ, ಆರ್ಐ ಅಜಯ್ ಇತರರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ