ಶಾಸಕರ ಆದೇಶದ ಮೇರೆಗೆ ಇಂದು ವಾಲ್ಮೀಕಿ ಮಹರ್ಷಿ ನೂತನ ಪುತ್ಥಳಿ ಅನಾವರಣಗೊಳಿಸಿದ : ಎನ್ ವೈ ಪಿ ಚೇತನ್
(CHITRADURGA): ಮೊಳಕಾಲ್ಮುರು: ಪಟ್ಟಣದ ಕನಕುಪ್ಪೆ ಗ್ರಾಮದಲ್ಲಿ ಇಂದು ನಡೆದ ವಾಲ್ಮೀಕಿ ಮಹರ್ಷಿ ನೂತನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಯಾದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ.
ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಅವರು ಸುಮಾರು ವರ್ಷಗಳ ಕನಸು ಇಂದು ನನಸಾಗಿರುವುದು ತುಂಬಾ ಸಂತಸದ ವಿಷಯ, ವಿಶ್ವಖ್ಯಾತಿ ಪಡೆದ ರಾಮಾಯಣ ಕಾವ್ಯವನ್ನು 24,000 ಶ್ಲೋಕಗಳಿಂದ 7 ಕಾಂಡಗಳಿಂದ ಕೂಡಿರುವ ಕಾವ್ಯವನ್ನು ರಚಿಸಿದ ಕೀರ್ತಿ ಇವರದು, ಹಾಗಾಗಿ ನಾವೆಲ್ಲರೂ ಕೂಡ ಅವರನ್ನು ಸ್ಮರಿಸುವಂತದು.
ಶಾಸಕರು ಬೇರೆ ಕೆಲಸದ ಮೇಲೆ ನನ್ನನ್ನು ಇಲ್ಲಿಗೆ ಬರಲು ಸೂಚಿಸಿದರು ಅವರ ಒಂದು ಸಲಹೆಯಿಂದ ಇಂದು ಈ ಗ್ರಾಮಕ್ಕೆ ಆಗಮಿಸಿರುವುದು ನನ್ನ ಪುಣ್ಯ ಎಂದರು.
ಇನ್ನೊಂದು ಸಂಗತಿ ಏನೆಂದರೆ ಶಾಸಕರ ಕೆಲ ನಾಲ್ಕು ಜನ ಹಿಂಬಾಲಕರಿಂದಾಗಿ, ಕ್ಷೇತ್ರದಲ್ಲಿ ಅಧಿಕಾರಿಗಳನ್ನು ದಿಕ್ಕು ತಪ್ಪಿಸಿ ಶಾಸಕರ ಹೆಸರು ಹೇಳಿಕೊಂಡು ಶಾಸಕರ ಹೆಸರಿಗೆ ಕಳಂಕ ತರತ್ತಿರುವುದು ತುಂಬಾ ನೋವಿನ ಸಂಗತಿ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ನಡೆಯುವಂತಹ ಕೆಲ ವಿಷಯಗಳು ಶಾಸಕರ ಗಮನಕ್ಕೆ ಕೊಡದೆ ಅಂತಹ ಕೆಲಸಗಳು ಮಾಡುತ್ತಿರುವುದು ತುಂಬಾ ನೋವಿನ ಸಂಗತಿ.
ಶಾಸಕರ ಜೊತೆ ಇದ್ದುಕೊಂಡು ಅವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿರುವುದು,
ಅವರು ತುಂಬಾ ಕೋಪಿಷ್ಟ ಯಾವಾಗಲೂ ಕೋಪದಲ್ಲಿಯೇ ಮಾತನಾಡುತ್ತಾರೆ ಯಾರು ಹೋದರು ಸ್ಪಂದಿಸುವುದಿಲ್ಲ ಎಂಬ ಅಪಪ್ರಚಾರಗಳು ನಡೆಯುತ್ತಿವೆ ಇವಕ್ಕೆಲ್ಲಾ ಕ್ಷೇತ್ರದ ಜನರು ಕಿವಿಗೊಡದೆ ಅವರ ಅಭಿವೃದ್ಧಿಗೆ ಸಹಕರಿಸಿ,
7 ಬಾರಿ ಶಾಸಕರಾಗಿ ಆಯ್ಕೆಯಾದರೂ ಸಹ ಯಾವುದೇ ಐಷಾರಾಮಿ ಅಥವಾ ತೋರ್ಪಡಿಕೆಯ ಜೀವನಕ್ಕೆ ಮುಂದಾಗದೆ ಸದಾ ಅಭಿವೃದ್ಧಿಯನ್ನೇ ಬಯಸುವಂತಹ ಹಸನ್ಮುಖಿ ಜೀವ ಸದಾ ಅಭಿವೃದ್ಧಿನೇ ಬಯಸುವಂತಹ ಅಭಿವೃದ್ಧಿಯ ಹರಿಕಾರ ಕ್ಷೇತ್ರದ ಅಭಿವೃದ್ಧಿಯನ್ನು ಮುಗಿಲತ್ತ ಕೊಂಡೊಯ್ಯುವ ಸರಳ ರಾಜಕಾರಣಿ.
ಎಲ್ಲಿ ಕೋಪ ಜಾಸ್ತಿ ಇರುತ್ತೋ ಅಲ್ಲಿಯೇ ಪ್ರೀತಿ ಜಾಸ್ತಿ ಇರುತ್ತದೆ.
ಎನ್ ವೈ ಕುಟುಂಬ ಹಾಗೂ ಎನ್ ವೈ ಚೇತನ್ ರವರ ರಾಜಕೀಯ ಬೆಳವಣಿಗೆಯನ್ನು ಸಹಿಸಲಾರದ ಕೆಲ ಕಿಡಿಗೇಡಿಗಳು ಇಂತಹ ಕಳಂಕ ತರವ ಕೆಲಸಗಳನ್ನು ಮಾಡುತ್ತಿರುವುದು ಸಮಂಜೋಸ್ತವಲ್ಲ ಎಂದು ತಮ್ಮ ಮನದಾಳದ ನೋವನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ತಮ್ಮೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ನರಸಿಂಹ ರೆಡ್ಡಿ, ಬೊಮ್ಮದೇವರಹಳ್ಳಿ ಗೋವಿಂದಪ್ಪ, ನಾಗಸಮುದ್ರ ಬಸವರಾಜ್, ಮಾಜಿ ಅಧ್ಯಕ್ಷರಾದ ಗುರುಲಿಂಗಪ್ಪ, ಮೇಲಿನಕಣಿವೆ ತಿಪ್ಪೇಸ್ವಾಮಿ, ಮಧು ರೆಡ್ಡಿ, ಕೊಂಡ್ಲಹಳ್ಳಿ ಕಿರಣ್ ಕುಮಾರ್, ಲೋಹಿತ್ ಭಂಡಾರಿ,ಗಜೇಂದ್ರ, ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.