ಪ್ರಗತಿಪರ ಸಂಘಗಳ ಒಕ್ಕೂಟದಿಂದ ಭೂ ಕಬಳಿಕೆ ವಂಚನೆ ವಿರುದ್ಧ ವೇಮಗಲ್ ಚಲೋ ಪ್ರತಿಭಟನೆ
(KOLARA): ಬಂಗಾರಪೇಟೆ: ಪಟ್ಟಣದಲ್ಲಿ ಪ್ರಗತಿಪರ ಸಂಘಗಳ ಒಕ್ಕೂಟದಿಂದ ಭೂ ಕಬಳಿಕೆ ವಂಚನೆ ವಿರುದ್ಧ ವೇಮಗಲ್ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆ ಆರ್ ಎಸ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಚಿಕ್ಕನಾರಾಯಣ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ದಲಿತರ ಆಸ್ತಿಗಳ ಕಬಳಿಕೆ ಇಂದಿಗೂ ಸಹ ನಡಿಯುತ್ತಿದೆ.
ಇಂತಹ ಘಟನೆ ಎಂದು ಕೋಲಾರ ಜಿಲ್ಲೆಯ ಚನ್ನಸಂದ್ರ ಗ್ರಾಮದ ಬಡ ದಲಿತ ಮಹಿಳೆ ಲಕ್ಷ್ಮಮ್ಮ ಎಂಬವರ ಜಮೀನನ್ನು ಖರೀದಿ ಮಾಡುವ ನೆಪದಲ್ಲಿ ಬೆಂಗಳೂರಿನ ವಿಜಿ ಕುಮಾರ್ ಎಂಬುವರು ಮೋಸ ಮಾಡಿ ವಂಚನೆ ಮಾಡಿದ್ದಾರೆ.
ಇಂದು ಚನ್ನಸಂದ್ರ ಗ್ರಾಮದಿಂದ ವೇಮಗಲ್ ನಾಡಕಚೇರಿ ವರೆಗೂ ಕಾಲ್ನಾಡಿಗೆ ಮುಖಾಂತರ ಜಾಥ ನಡೆಸಿ ಲಕ್ಷ್ಮಮ್ಮ ಕುಟುಂಬದವರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಹುಣಸನಹಳ್ಳಿ ವೆಂಕಟೇಶ್, ಕೃಷ್ಣಪ್ಪ, ಕಾರಬೆಲೆ ವೆಂಕಟೇಶ್ ಇನ್ನು ಅನೇಕ ಮುಖಂಡರು ಇದ್ದರು.
ವರದಿ: ವಿಷ್ಣು ಕೋಲಾರ