ಸಮಸ್ಯೆಗಳ ಗೂಡದ ವೇಮಗಲ್ ರೈತ ಸಂಪರ್ಕ ಕೇಂದ್ರ
(KOLARA): ಕೋಲಾರ : ತಾಲೂಕಿನ ವೇಮಗಲ್ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಹೇಳೋರಿಲ್ಲ ಕೇಳೋರಿಲ್ಲ ಎಂದು ದಲಿತ ಮುಖಂಡರಾದ ಪುರಹಳ್ಳಿ ಜಿ. ಯಲ್ಲಪ್ಪ, ಚನ್ನಪ್ಪನಹಳ್ಳಿ ಜಿ. ನಾಗರಾಜ್, ನಾಗನಾಳ ರಮೇಶ್ ಹಾಗೂ ಸುತ್ತಮುತ್ತಲಿನ ರೈತರು ಆಕ್ರೋಶ ವ್ಯಕ್ತ ಪಡಿಸಿದರು.
ಸಮಸ್ಯೆಗಳು
ವೇಮಗಲ್ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಸುಮಾರು ಹಳ್ಳಿಗಳ ಬೇಸಿಗೆಯ ರೈತರ ಬೆಳೆ ಸಮೀಕ್ಷೆ ಮನಸ್ಸಿಗೆ ಬಂದಂತೆ ಮಾಡಿದ್ದಾರೆ ಸುಮಾರು 90%ರಷ್ಟು ಬೀಡು ಅಥವಾ ಪಾಳು ಮಾಡಿದ್ದಾರೆ ಇದಕ್ಕೇಲಾ ಹೊಣೆಯಾರು ಕಛೇರಿಯಲ್ಲಿ ಬಂದು ಕೇಳಿದರೆ ಸರಿಯಾಗಿ ಸ್ಪಂದಿಸುವುದಿಲ್ಲ ಉಡಾಫೆ ಉತ್ತರಗಳನ್ನು ನೀಡುತ್ತಾರೆ ಕಛೇರಿಯಲ್ಲಿ ಹೊರ ಗುತ್ತಿಗೆದಾರ ಸಂತೋಷ್ ರೈತರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ .
ವೇಮಗಲ್ ರೈತ ಸಂಪರ್ಕ ಕೇಂದ್ರದಲ್ಲಿ ಸರ್ಕಾರಿ ದಿನಾಚರಣೆಯ ಗಳನ್ನು ಸಹ ಆಚರಣೆ ಮಾಡುವುದಿಲ್ಲ ಡಾ. ಬಿ. ಆರ್ ಅಂಬೇಡ್ಕರ್ ರವರ ಜಯಂತಿ, ಬಸವ ಜಯಂತಿ ಕನಿಷ್ಠ ಪಕ್ಷ ಸ್ವಾತಂತ್ರ್ಯ ದಿನಾಚರಣೆಗೆ ದೀಪಾಲಂಕಾರವನ್ನು ಸಹ ಮಾಡಿಲ್ಲ ಸರ್ಕಾರದ ಆದೇಶಗಳಿಗೆ ಇಲ್ಲಿ ಬೆಲೆ ಇಲ್ಲದೆ ಗಾಳಿಗೆ ತೂರಿದ್ದಾರೆ. ಈ ಕಛೇರಿಯಲ್ಲಿ ಉತಾತ್ಮರ ಭಾವಚಿತ್ರಗಳು ಬಿರುವುಗೆ ಸೀಮಿತವಾಗಿದೆ ಕೇಳಿದಾಗ ಮಾತ್ರ ಗೋಡೆ ಕಟ್ಟುವ ಕೆಲಸ ಮಾಡಿದ್ದಾರೆ ಇದೇ ಮೊದಲೇನಲ್ಲ ಈ ಮುಂಚೆ ಸಹ ಇದೇ ರೀತಿ ಮಾಡಿದ್ದರು.
ಇಲ್ಲಿ ಅಳವಡಿಸಿರುವ ನೋಟಿಸ್ ಬೋರ್ಡ್ ನಲ್ಲಿ ರೈತರಿಗೆ ಯಾವುದೇ ಮಾಹಿತಿ ಹಾಕುವುದಿಲ್ಲ ಕನಿಷ್ಠ ಇಲ್ಲಿನ ಕೃಷಿ ಅಧಿಕಾರಿ ಬದಲಾವಣೆಯಾಗಿ ಸುಮಾರು ಒಂದು ವರ್ಷ ಕಳೆದರು ಅಧಿಕಾರಿಗಳ ಹೆಸರು ಮೊಬೈಲ್ ಸಂಖ್ಯೆ ಬದಲಾವಣೆ ಮಾಡಿಲ್ಲ, ರೈತರಿಗೆ ಮಾಹಿತಿ ನೀಡುವ ಸೂಚನಾ ಫಲಕಕ್ಕೆ ದೂಳು ತುಂಬಿಕೊಂಡಿದೆ ಅದನ್ನು ಸಹ ಶುಚಿ ಮಾಡಿಲ್ಲ.
ಈ ಎಲ್ಲಾ ಲೋಪ ದೋಷಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಶಿಸ್ತು ಕ್ರಮ ಕೈ ಗೊಳ್ಳದಿದ್ದರೆ ಇನ್ನು ಹತ್ತು ಸಮಸ್ಯೆಗಳನ್ನು ಖಂಡಿಸಿ ಗುರುವಾರ ವೇಮಗಲ್ ರೈತ ಸಂಪರ್ಕ ಕೇಂದ್ರವನ್ನು ಮುತ್ತಿಗೆ ಹಾಕಿ ತಮಟೆಗಳನ್ನು ಬಾರಿಸುವ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದು ದಲಿತ ಮುಖಂಡರು ಹಾಗೂ ರೈತರುಗಳು ಹೆಚ್ಚಿನ ಸಂಖ್ಯೆ ಭಾಗವಸಿ ನಾವು ಬರುತ್ತೇವೆ ನೀವು ಬನ್ನಿ ಬೇರೆಯವರನ್ನು ಕರೆತನ್ನಿ ಎಂದರು.
ಇಲ್ಲಿನ ಕೃಷಿ ಅಧಿಕಾರಿಗಳಾದ ಶ್ರೀಧರ್ ರವರಿಗೆ ಕರೆ ಮಾಡಿ ನೀವು ಕಚೇರಿಗೆ ಯಾವಾಗ ಬರುತ್ತೀರಿ ಸರ್ ಎಂದರೆ ಫೋನ್ ನಲ್ಲೇ ಹೇಳಿ ನಿಮ್ಮ ಸಮಸ್ಯೆ ಎನ್ನುತ್ತಾರೆ,
ಇಲ್ಲಿನ ಸಿಬ್ಬಂದಿ ಯಾರು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುವುದಿಲ್ಲ ಸಿಗುವುದಿಲ್ಲ ಸ್ಪಂದಿಸುವುದಿಲ್ಲ, ವೇಮಗಲ್ ಬಸ್ ನಿಲ್ದಾಣದಿಂದ ಸುಮಾರು ಒಂದು ಕಿಲೋಮೀಟರ್ ದೂರವಿರುವ ಈ ಕಚೇರಿಗೆ ದಣಿದು ಬಂದ ರೈತರಿಗೆ ಕನಿಷ್ಠ ಪಕ್ಷ ಕುಡಿಯಲು ನೀರನ್ನು ಸಹ ಇಡುವ ಸೌಜನ್ಯವಿಲ್ಲ ಹೃದಯ ಭಾಗದಲ್ಲಿ ಇರುವ ವೇಮಗಲ್ ಕೇಂದ್ರದಲ್ಲೇ ಈ ರೀತಿಯಾದರೆ ರೈತರ ಪರಿಸ್ಥಿತಿ ಏನು ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈ ಗೊಂಡು ಈ ಕೂಡಲೇ ಅಮಾನತು ಗೊಳಿಸಿ ಉತ್ತಮವಾದ ಅಧಿಕಾರಿಗಳನ್ನು ನೇಮಕ ಮಾಡಬೇಂದು ಗುರುವಾರ ವೇಮಗಲ್ ರೈತ ಸಂಪರ್ಕ ಕೇಂದ್ರ ಮುಂದೆ ಪ್ರತಿಭಟನೆ ಮಾಡಲಾಗುವುದು.
ವರದಿ: ವಿಷ್ಣು ಕೋಲಾರ