ವೀರಶೈವ ಲಿಂಗಾಯಿತರ ಸ್ಮಶಾನ ಒತ್ತುವರಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರಿಂದ ಒತ್ತಾಯ
(KOLARA): ಬಂಗಾರಪೇಟೆ : ತಾಲೂಕಿನ ಕಾರಹಳ್ಳಿ ಹಾಗೂ ಯಲಬುರ್ಗಿ ಮತ್ತು ತಿಮ್ಮಾಪುರ ಗ್ರಾಮಗಳಿಗೆ ಸೇರಿರುವ ವೀರಶೈವ ಲಿಂಗಾಯತ ಸ್ಮಶಾನವು ಕಾರಹಳ್ಳಿ ಗ್ರಾಮದಿಂದ ತಿಮ್ಮಾಪುರ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ ಇರುತ್ತದೆ ಈ ಸ್ಮಶಾನ ಬಿಟ್ಟರೆ ನಮಗೆ ಬೇರೆ ಯಾವುದೇ ಸ್ಮಶಾನ ಇರುವುದಿಲ್ಲ ಆದರೆ ಕೆಲವರು ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಮಂಗಳವಾರ ಮಧ್ಯಾಹ್ನ 1 ಗಂಟೆಯಲ್ಲಿ ಗ್ರಾಮಸ್ಥರಾದ ಅರುಣ್ ಆರೋಪ ಮಾಡಿದರು.
ಈ ವೇಳೆ ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ರಶ್ಮಿ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡುತ್ತಾ, ನಮ್ಮ3 ಗ್ರಾಮಗಳಿಗೆ ಒಂದೇ ಸ್ಮಶಾನ ಇರುವುದರಿಂದ ತಾಲೂಕ ಆಡಳಿತ ದಯಮಾಡಿ ನಮ್ಮ ಗ್ರಾಮಗಳಿಗೆ ಅನುಕೂಲವಾಗುವ ರೀತಿ ಸ್ಮಶಾನವನ್ನು ಸರ್ವೆ ಮಾಡಿಸಿ ಬೌಂಡರಿ ಗುರುತಿಸಿ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಕೊಡಬೇಕೆಂದು ಒತ್ತಾಯ ಮಾಡಿದರು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ವೀರಶೈವ ಸಮುದಾಯದ ಗೌರವಾಧ್ಯಕ್ಷರು ಚಂದ್ರಕುಮಾರ್ ಎಂ,ಅಧ್ಯಕ್ಷರು ಎಂ ಎನ್ ರವೀಂದ್ರ, ಉಪಾಧ್ಯಕ್ಷರು ಅರುಣ್ ಕುಮಾರ್,ಎಸ್ ಸಹ ಕಾರ್ಯದರ್ಶಿ ಕಿರಣ್ ಸಿ , ಲೋಕೇಶ್, ರವಿಕುಮಾರ್, ಉದಯ್ ಕುಮಾರ್, ಉಮೇಶ್ ತಿಮ್ಮಾಪುರ ವಿಕಿತ್, ಯೋಗೇಶ್,ಮಂಜುನಾಥ್,ಬಸವಲಿಂಗಪ್ಪ, ಕೆಸರನಹಳ್ಳಿ ನಾಗರಾಜ್ ಮೊದಲಾದವರು ಇದ್ದರು.
ವರದಿ: ವಿಷ್ಣು ಕೋಲಾರ