ನಿಯಮಗಳನ್ನು ಉಲ್ಲಂಘಿಸಿ ನಸುಕಿನ ಜಾವವೇ ಮಧ್ಯಮರಾಟ.. ತೊಂದರೆಗೊಳಗಾದ ವಿದ್ಯಾರ್ಥಿಗಳು, ಸಾರ್ವಜನಿಕರು…!
(HAASANA): ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ನಗರದಲ್ಲಿ ಮಧ್ಯ ಅಂಗಡಿಗಳಲ್ಲಿ ಮಧ್ಯದ ಮಾರಾಟಕ್ಕೆ ಸಮಯ ನಿಗಧಿ ಮಾಡಿದರು ಕೂಡ ನಗರದ ಹಲವು ಬಾರ್ ಗಳೂ ನಸುಕಿನ ಜಾವ ಮದ್ಯ ಮರಾಟ ಮಾಡುತಿದ್ದು. ಇದರಿಂದ ಕುಡಿಯುವ ಹವ್ಯಾಸಕ್ಕೆ ಒಳಗಾದವರು ನಸುಕಿನ ಜಾವವೇ ಮದ್ಯದಂಗಡಿಗೆ ಹೋಗಿ ಕುಡಿದು ರಸ್ತೆಗಳಲ್ಲಿ ಬಿದ್ದು ಒದ್ದಾಡುವುದು, ಅಸಭ್ಯ ವರ್ತನೆಗಳನ್ನು ಮಾಡುತ್ತಾ ನಗರದಲ್ಲೀ ತಿರುಗುವುದರಿಂದ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಸರ್ವಜನಿಕರಿಗೆ ತೊಂದರೆ ಉಂಟು ಮಾಡುತಿದ್ದಾರೆ.
ಈ ಎಲ್ಲ ಬೆಳವಣಿಗೆಯಿಂದ ಸಭ್ಯ ಜನರು ನಗರದಲ್ಲಿ ತಿರುಗಾಡದಂತಹ ಪರಿಸ್ಥಿತಿ ಉಂಟಾಗಿದೆ. ಹಾಗೂ ನಾಗರದ ಮಧ್ಯದಂಗಡಿಗಳು ಅಭಕಾರಿ ಇಲಾಖೆಯ ಎಲ್ಲ ನಿಯಮಗಳನ್ನ ಗಾಳಿಗೆ ತೂರಿ ರಾಜಾರೋಷವಾಗಿ ಮಧ್ಯ ಮರಾಟ ಮಾಡುತ್ತೀವೆ. ಮಧ್ಯದಂಗಡಿಗಳಿಗೆ ಪರವನಾಗಿ ನೀಡುವಾಗ ಶರತ್ತುಗಳೊಂಧಿಗೆ ಪರವನಾಗಿ ನೀಡಿದರು ಸಹ ಯಾವ ನಿಯಮವು ಪಾಲನೆಯಗುತ್ತಿಲ್ಲಾ. ಇದು ಅಕ್ಷಮ್ಯ ಅಪರಾದವಾಗಿದೆ. ನಿಯಮ ಉಲ್ಲಂಘಿಸುವ ಮಧ್ಯದಂಗಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೆಕೆಂದು ವರುಣ ಚಕ್ರವರ್ತಿಯವರು ಸಾರ್ವಜನಿಕರ ಪರವಾಗಿ ಅಬಕಾರಿ ಇಲಾಖೆ ಚೆನ್ನರಾಯಪಟ್ಟಣ ಇವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದಾರೆ.