ಜಿಲ್ಲೆನ್ಯೂಸ್

7-15 ಎಕರೆ ಜಮೀನು ಗೇರು ಸಾಗುವಳಿ ಷರತ್ತು ಉಲ್ಲಂಘನೆ.

7-15 ಎಕರೆ ಜಮೀನು ಗೇರು ಸಾಗುವಳಿ ಷರತ್ತು ಉಲ್ಲಂಘನೆ.

(SHIVAMOGA): ಸಾಗರ ತಾಲ್ಲೂಕು ಕಸಬಾ ಹೋಬಳಿ ಮಾಸೂರು ಗ್ರಾಮದ ಸ.ನಂ. 105 ರ 21-15 ಎಕರೆ ಗೊಮಾಳ ಜಮೀನಿನ ಪೈಕಿ ರಿ.ಸ.ನಂ. 158ರ 7-15 ಎಕರೆ ಜಮೀನು ಗೇರು ಸಾಗುವಳಿ ಷರತ್ತು ಉಲ್ಲಂಘನೆ ಪ್ರಕರಣ ಆಗಿದ್ದು, ಅದರ ಮೇಲಿನ ಖಾತೆ ಪಹಣಿ ರದ್ದು ಪಡಿಸಿ ಸರ್ಕಾರದ ವಶಕ್ಕೆ ಪಡೆಯುವ ಬಗ್ಗೆ ಇಂದು ಗ್ರಾಮದ ಎಲ್ಲಾ ಕುಟುಂಬದವರು ಸೇರಿ ಪತ್ರಿಕಾ ಗೋಷ್ಠಿಯನ್ನು ನಡೆಸಿದರು.


ಮೇಲ್ಕಂಡ ಗೋಮಾಳ ಜಮೀನು 1963-64 ನೇ ವರ್ಷದಲ್ಲಿ ಮೆಳವರಿಗೆ ಗ್ರಾಮದ ನಾರಾಯಣಪ್ಪ ಎಂಬುವವರಿಗೆ ಗೇರು ಸಾಗುವಳಿಗೆ ಮಾತ್ರ ಷರತ್ತು ವಿಧಿಸಿ ಜಿಲ್ಲಾಧಿಕಾರಿ ಶಿವಮೊಗ್ಗ ಇವರ ಅನುಮತಿಯ ಮೇರೆಗೆ ತಹಶಿಲ್ದಾರ್ ಸಾಗರ ಇವರು ಹಕ್ಕುಪತ್ರ ವಿತರಿಸಿರುತ್ತಾರೆ . ಹಕ್ಕುಪತ್ರ ವಿತರಿಸಲಾಗಿತ್ತು ಯಾವುದೇ ಕಾಲದಲ್ಲಿ ಸದರಿ ನಾರಾಯಣಪ್ಪ ಇವರು ಷರತ್ತು ಪ್ರಕಾರ ಜಮೀನಿನಲ್ಲಿ ಗೇರು ಸಾಗುವಳಿ ಮಾಡಿರುವುದಿಲ್ಲ. ಹಾಗೂ ಸ್ವತ್ತಿನ ಸ್ವಾಧೀನ ಹೊಂದಿರುವುದಿಲ್ಲ. ಯಾವುದೇ ದಿಕ್ಕಿನಲ್ಲಿ ಬೇಲಿ ವಗೈರೆ ಈವರೆಗೆ ಇರಲಿಲ್ಲ. ಸದರಿ ಗೇರು ಸಾಗುವಳಿ ಮಾಡದ ಕಾರಣ ಭೂ ಕಂದಾಯ ನಿಯಮಗಳ ಪ್ರಕಾರ ಷರತ್ತು ಉಲ್ಲಂಘಿಸಿರುವ ಕಾರಣ ಸದರಿ ಜಮೀನು ಸರ್ಕಾರದ ಜಮೀನಾಗಿರುತ್ತದೆ. ಷರತ್ತು ಉಲ್ಲಂಘನೆ ಕಂದಾಯ ಅಧಿಕಾರಿಗಳ ಗಮನಕ್ಕೆ ಬಾರದೆ ಕಂದಾಯ ದಾಖಲೆಗಳಲ್ಲಿ ಮಂಜೂರಿದಾರರ ಹೆಸರು ಮುಂದುವರೆದಿರುವುದು ಕಾನೂನು ಬಾಹಿರವಾಗಿರುತ್ತದೆ. ಮತ್ತು ಅದರ ಮೇಲಿನ ಸ್ವತ್ತು ಹಸ್ತಾಂತರ ದಾಖಲಾತಿಗಳಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ.
ಮಾಸೂರು ಗ್ರಾಮ ರಿ ಸ ನಂ. 158 ರ 7-15 ಎಕರೆ ಜಮೀನು ನೂರಾರು ವರ್ಷಗಳಿಂದ ಗ್ರಾಮಸ್ಥರು ಸಂರಕ್ಷಣೆ ಮಾಡಿಕೊಂಡು ಬಂದ ಸ್ವತ್ತಾಗಿರುತ್ತದೆ. ಸದರಿ ಜಾಮೀನು ಹುಲ್ಲುಗಾವಲು ಗಿಡಮರಗಳಿಂದ ಕೂಡಿದ ಪ್ರದೇಶವಾಗಿರುತ್ತದೆ ಎಂದರು.




ಪೋಲಿಸರು ಸಾರ್ವಜನಿಕರ ಪ್ರತಿರೋಧವನ್ನು ನ್ಯಾಯಾಲಯಕ್ಕೆ ತಿಳಿಸಿದೇ ಇರಲು ಮತ್ತು ಕಂದಾಯ ಅಧಿಕಾರಿಗಳಿಗೆ ತಿಳಿಸದೇ ರೇಣುಕಮ್ಮ ಮತ್ತು ಕುಟುಂಬದವರ ಹಣ ಬಲ ಮತ್ತು ಅಧಿಕಾರ ಬಲ ಕಾರಣವಾಗಿರುತ್ತದೆ. ಪೋಲಿಸರೇ ಮುಂದೇ ನಿಂತು ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಸ್ವಾಧೀನ ಮಾಡಿಸಿ ಕೊಟ್ಟಿರುವುದು ನಿಯಮ ಬಾಹಿರವಾಗಿರುತ್ತದೆ.

ಸದರಿ ಪ್ರಕರಣ ಒಂದು ತಾರ್ಕಿಕ ಅಂತ್ಯವಾಗುವರೆಗೂ ಮತ್ತು ನಮ್ಮ ಗ್ರಾಮಸ್ಥರ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಮ್ಮ ಗ್ರಾಮದಲ್ಲಿ ಮುಂಬರುವ ಎಲ್ಲಾ ರೀತಿಯ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಊರಿನ ಸರ್ವ ಸದಸ್ಯರುಗಳು ತೀರ್ಮಾನ ತೆಗೆದುಕೊಂಡಿರುತ್ತೇವೆ.
2010 ರಿಂದ 2022 ರವರೆಗಿನ ಮಾಸೂರು ಗ್ರಾಮ ಸ.ನಂ./ 105 ರಿ ಸ ನಂ. 15 ರ ಒಟ್ಟು 11 ಗೂಗಲ್ ಮ್ಯಾಪ್ ಪೋಟೋಗಳು ಸಹ ಸಾಕ್ಷಿ ಇದ್ದು ಆದ್ದರಿಂದ ಮೇಲ್ಕಂಡ ವಿಷಯದಲ್ಲಿ ಪ್ರಸ್ತಾಪಿಸದಂತೆ ಸಾಗರ ತಾಲ್ಲೂಕು ಮಾಸೂರು ಗ್ರಾಮದ ಸ.ನಂ. 158 ರ7-15 ಎಕರೆ ಜಮೀನು ಷರತ್ತು ಉಲ್ಲಂಘನೆ ಕಾರಣ ಸರ್ಕಾರದ ವಶಕ್ಕೆ ಪಡೆದು ಅದರ ಮೇಲಿನ ಖಾತೆ ಪಹಣಿ ರದ್ದುಪಡಿಸಲು ತುರ್ತಾಗಿ ಅಗತ್ಯ ಕ್ರಮ ಜರುಗಿಸಬೇಕೆಂದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code