ಸಮಾಜದಲ್ಲಿ ಸಹಬಾಳ್ವೆ ಮುಖ್ಯವಾಗಿದೆ-
ಉಪ ತಹಶೀಲ್ದಾರ್ ಕಲ್ಲಪ್ಪ ಮೆಣಸಿನಹಾಳ್
*ಸಾಗರ ತಾಲೂಕು ಕಛೇರಿಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ*
ಸಾಗರ:ಸೆ-17/ ಸಮಾಜದಲ್ಲಿ ಸಹಬಾಳ್ವೆಯನ್ನು ಮೂಡಿಸಿದವರು ದಾರ್ಶನಿಕರು ಎಂದು ಉಪ ತಹಶೀಲ್ದಾರ್ ಕಲ್ಲಪ್ಪ ಮೆಣಸಿನಾಳ್ ಹೇಳಿದರು ಅವರು ಇಲ್ಲಿನ ತಾಲೂಕು ಸಭಾಂಗಣದಲ್ಲಿ ತಾಲೂಕ್ ಆಡಳಿತ ಆಯೋಜಿಸಿದ ವಿಶ್ವಕರ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ ಎಲ್ಲಾ ದಾರ್ಶನಿಕರ ಆದರ್ಶಗಳನ್ನು ಪಾಲಿಸುವುದರಿಂದ ಸಮಾಜ ಸುಧಾರಣೆ ಸಾಧ್ಯ ಪ್ರತಿಯೊಬ್ಬ ದಾರ್ಶಿನಿಕರು ಜಗತ್ತಿನ ಉನ್ನತಿಗಾಗಿ ಶ್ರಮಿಸಿದ್ದಾರೆ ಮನುಷ್ಯ ಮನುಷ್ಯ ನಡುವಿನ ಸಂಬಂಧವನ್ನು ಹೆಚ್ಚಿಸುವ ಸಲುವಾಗಿ ತಮ್ಮದೇ ಆದ ತತ್ವ ಆದರ್ಶಗಳನ್ನು ತಿಳಿಸುವ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ್ದಾರೆ ಅವರ ಮಾರ್ಗದರ್ಶನ ಎಲ್ಲರಲ್ಲೂ ಇರಬೇಕಾಗಿದೆ ಜಗತ್ತನ್ನು ಗೆದ್ದ ವಿಶ್ವಕರ್ಮ ಎಲ್ಲರಿಗೂ ಮಾದರಿಯಾದ ಆದರ್ಶಗಳನ್ನು ನೀಡಿದ್ದಾರೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಬೆಳ್ವಕೇಶವ ಆಚಾರ್ಯ ಅವರು ಉಪನ್ಯಾಸವನ್ನು ನೀಡಿ ಜಗತ್ತಿನ ಸರ್ವಶ್ರೇಷ್ಠ ಧಾರ್ಶನಿಕರಲ್ಲಿ ವಿಶ್ವಕರ್ಮ ಪ್ರಮುಖರಾಗಿದ್ದಾರೆ ಅವರ ಕಾರ್ಯ ಜಗತ್ತೇ ಹೆಚ್ಚುವಂತದು ಅವರ ಆದರ್ಶ ಗಳಿಂದ ಸಮಾಜ ಸುಧಾರಣೆಗೆ ಹೆಚ್ಚು ಮಹತ್ವ ದೊರಕಿದೆ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ತಮ್ಮ ಕಾರ್ಯವನ್ನು ಸಮಾಜ ಸುಧಾರಣೆಗಾಗಿ ಮೀಸಲಿಟ್ಟರು ಅಂತಹ ಮಹಾನ್ ಪುರುಷರ ಜಯಂತಿಯನ್ನು ಆಚರಿಸುವುದರ ಜೊತೆಯಲ್ಲಿ ಅವರ ತತ್ವ ಸಿದ್ಧಾಂತಗಳನ್ನು ಪಾಲಿಸುವ ಕೆಲಸ ಆಗಬೇಕಾಗಿದೆ ಅವರನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಮೂಲಕ ಅವರ ವಿಚಾರಧಾರೆಗಳನ್ನು ಅನುಸರಿಸುವ ಕೆಲಸ ಆಗಲಿ. ವಿಶ್ವಕರ್ಮ ಸಮಾಜ ವಾಸ್ತುಶಿಲ್ಪ ಕಲೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ, ಸರ್ಕಾರ ವಿಶ್ವಕರ್ಮ ಜಯಂತಿಯನ್ನು ಆಚರಿಸುವ ಮೂಲಕ ಸಮಾಜದ ಉನ್ನತಿಗೆ ಸಹಕರಿಸುತ್ತಿರುವುದು ಅಭಿನಂದನಿಯ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷರಾದ ಕೆ. ಮಂಜುನಾಥ್ ಆಚಾರ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿ.ಟಿ. ಸ್ವಾಮಿ ಹಾಗೂ ತಾಲೂಕ ಕಚೇರಿಯ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.
ವರದಿ:- ರಾಘವೇಂದ್ರ ತಾಳಗುಪ್ಪ