ಸೃಜನಶೀಲ ಕಾರ್ಯ ಆರಂಭಿಸಿದ್ದೆ ವಿಶ್ವಕರ್ಮ ..ಎ.ಸಿ.ಯತೀಶ್ ಆರ್.
(SHIVAMOGA): ಸಾಗರ- ಜಗತ್ತನ್ನು ಕಟ್ಟುವಲ್ಲಿ ವಿಶ್ವಕರ್ಮ ಅವರ ಪಾತ್ರ ಮುಖ್ಯವಾಗಿದೆ ಎಂದು ಸಾಗರ ಉಪವಿಭಾಗಾಧಿಕಾರಿಗಳಾದ ಯತೀಶ್ ಆರ್ ಐಎಎಸ್ ಇವರು ಹೇಳಿದರು.
ಅವರು ಇಲ್ಲಿನ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿಶ್ವದ ಶ್ರೇಷ್ಠ ಪರಂಪರೆಯಲ್ಲಿ ವಿಶ್ವಕರ್ಮ ಪರಂಪರೆ ಮುಖ್ಯವಾಗಿದೆ. ಅವರ ಕಾರ್ಯ, ಸೃಜನಶೀಲತೆ, ವಿನ್ಯಾಸ ಮೊದಲಾದ ಕಾರ್ಯ ವಿಶೇಷವಾಗಿದೆ, ಜಗತ್ತು ಅತಿ ಸುಂದರವಾಗಿ ನಿರ್ಮಾಣವಾಗಲು ವಿಶ್ವಕರ್ಮ ಸಮುದಾಯದ ಕಾರ್ಯ ವಿಶಿಷ್ಟವಾಗಿದೆ. ಭೂಮಂಡಲದ ನಕ್ಷೆ ತಯಾರಿಕೆಯಲ್ಲಿ ಗುರುತಿಸಿಕೊಂಡಿದ್ದರು ಎನ್ನುವುದು ವಿಶೇಷವಾಗಿದೆ ಎಂದರು.
ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ವಿಶ್ವಕರ್ಮ ಪರಂಪರೆಗೆ ಪ್ರಾಚೀನ ಇತಿಹಾಸವಿದೆ. ಇಂದಿಗೂ ಸಮುದಾಯದ ಕೆಲಸ ವಿಶೇಷವಾಗಿದೆ ವಿಶ್ವಕರ್ಮರು ಅತ್ಯಂತ ಶ್ರಮಜೀವಿಗಳಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕಿ ಸುಮ ಎನ್ ಉಪನ್ಯಾಸ ನೀಡಿದರು ವೇದಿಕೆಯಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಮಂಜುನಾಥ, ಕಾರ್ಯದರ್ಶಿ ಜಯಂತ್ ಗಡೆಮನೆ. ಉಪಾಧ್ಯಕ್ಷರಾದ ಚಂದ್ರಚಾರ್, ಉಪತಹಸೀಲ್ದಾರ್ ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಶಾರದ ಪ್ರಾರ್ಥಿಸಿ ಶಾಂತ ಮೂರ್ತಿ ಸ್ವಾಗತಿಸಿ ಮೋಹನ್ ವಂದಿಸಿ ವಿ.ಟಿ.ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ವರದಿ: ರಾಘವೇಂದ್ರ ತಾಳಗುಪ್ಪ