ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಜನದನಿ ರತ್ನ ಪ್ರಶಸ್ತಿ, ಸನ್ಮಾನ
(SHIVAMOGA): ಕನ್ನಡ ರಾಜ್ಯೋತ್ಸವ: ಆನವಟ್ಟಿಯಲ್ಲಿ ಅದ್ದೂರಿ ಕಾರ್ಯಕ್ರಮ: ಜನದನಿ ಕರ್ನಾಟಕ ರಕ್ಷಣಾ ವೇದಿಕೆ ಆನವಟ್ಟಿ ವತಿಯಿಂದ ದಿನಾಂಕ 24 ರ ಭಾನುವಾರ ಸಂಜೆ 5 ಗಂಟೆಗೆ ನಗರದ ಶ್ರೀ ಶಾಂತಚಾರ್ ಮಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಕೆ.ಪಿ.ಎಸ್. ಶಾಲೆ ಆವರಣದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷ ವಿಜಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾನಾಡಿದ ಅವರು ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಜನದನಿ ರತ್ನ ಪ್ರಶಸ್ತಿ ನೀಡಿ ಸನ್ಮಾನ ಮಾಡಲಾವುದು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾಜ್ಯದ ಹೆಸರಾಂತ ನೃತ್ಯ ತಂಡಗಳಿಂದ ಮನಮೋಹಕ ನೃತ್ಯ ಪ್ರದರ್ಶನ ಹಾಗೂ ಜೀ ಕನ್ನಡ ಖ್ಯಾತಿಯ ನಟರಿಂದ ಮನೋರಂಜನಾ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಲಿದೆ. ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ವೇಷಭೂಷಣ ಸ್ಪರ್ಧೆ, ಭಾವಗೀತೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಣೆ ನಡಯಲಿದೆ.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಈ ಬಾರಿ ಎಸ್. ಮಧು ಬಂಗಾರಪ್ಪನವರು ಶಾಲಾ ಶಿಕ್ಷಣ ಇಲಾಖೆ ಸಚಿವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ಮತ್ತು ಶಾಸಕರು ಸೊರಬ ವಿಧಾನ ಸಭಾಕ್ಷೇತ್ರ ಸೊರಬ ಮತ್ತು ಚಲನ ಚಿತ್ರ ನಟ ಡಾ. ಶಿವರಾಜಕುಮಾರ ರವರನ್ನು ಆಹ್ವಾನಿಸಿದ್ದು ಸಮಾಜದ ಗಣ್ಯ ವ್ಯಕ್ತಿಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ಥಳೀಯ ವ್ಯಾಪಾರಸ್ಥರು, ಸಾರ್ವಜನಿಕರು ಹಾಗೂ ಸುತಮುತ್ತಲಿನ ಗ್ರಾಮಸ್ಥರು ಸಹಕಾರವನ್ನು ನೀಡಿದ್ದು, ಯಶಸ್ವಿಯಾಗಲಿ ಎಂದು ಪತ್ರಿಕಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜನದನಿಕರವೇಯ ಕಾರ್ಯಧ್ಯಕ್ಷರಾದ ಅಮಿತ್ ಎಸ್ಎ, ಗೌರಾಧ್ಯಕ್ಷರಾದ, ರಾಘವೇಂದ್ರ ಜಿ, ಪ್ರಧಾನ ಕಾರ್ಯದರ್ಶಿಯಾದ ಕೌಶಿಕ್, ಉಪಾಧ್ಯಕ್ಷರಾದ ಮಂಜುನಾಥ್ ಬಿ ಬಿ, ವಿಜೇಂದ್ರ ಸ್ವಾಮಿ ಎಣ್ಣೆಕೊಪ್ಪ ಕಾರ್ಯದರ್ಶಿಗಳಾದ, ಸಂತೋಷ್, ಸತೀಶ್ ಅಗಸನಹಳ್ಳಿ, ಪ್ರಮೋದ್ ದ್ವಾರಳ್ಳಿ, ಯುವರಾಜ್ ಆನವಟ್ಟಿ ಸತೀಶ್ ದ್ವಾರಳ್ಳಿ, ಎಲ್ಲಪ್ಪ ನೇರ್ಲಿಗಿ ಹಾಜರಿದ್ದರು.
ವರದಿ: ಮಧು ರಾಮ್ ಸೊರಬ