ಸ್ವೀಪ್ ಸಮಿತಿ ವತಿಯಿಂದ ಕಿರು ನಾಟಕದ ಮೂಲಕ ಮತದಾನ ಜಾಗೃತಿ
(SHIVAMOGA): ಸಾಗರ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಸಾಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್.ಎಸ್.ಎಸ್. (NSS) ಘಟಕದ ವತಿಯಿಂದ ಮತದಾರರ ಜಾಗೃತಿ ಕುರಿತು ಕಿರು ನಾಟಕವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ವಿ.ಟಿ.ಸ್ವಾಮಿ ಮಾತನಾಡಿ ಶಿವಮೊಗ್ಗ ಜಿಲ್ಲೆಯ ಪ್ರತಿಯೊಬ್ಬ ಮತದಾರರು ಮೇ 7ರಂದು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಸುಭದ್ರ ಗೊಳಿಸಬೇಕು, ಆ ದಿನ ಎಷ್ಟೆ ಕಷ್ಟವಾದರು ಮತದಾನ ಮಾಡುವುದನ್ನು ಮರೆಯಬೇಡಿ ಇದು ನಮ್ಮ ಮತ ನಮ್ಮ ಹಕ್ಕು ಎಂದರು. ಈ ಸಂದರ್ಭದಲ್ಲಿ ತಾಪಂ ಗಂಗಾಧರ, ನಿತ್ಯಾನಂದ ಮೊದಲಾದವರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ