ಒಂದು ದೇಶದ ಆಧಾರ ಸ್ಥಂಭ ಮತದಾನ : ನ್ಯಾಯಾಧೀಶ ಅಜಿತ್ ದೇವರಮನೆ
(KOLARA): ಮತದಾನ ಎಂಬುವುದು ಚುನಾವಣೆಗೆ ಸೀಮಿತವಲ್ಲ ಒಂದು ದೇಶದ ಭವಿಷ್ಯವನ್ನು ನಿರ್ಧರಿಸುವ ಆಧಾರ ಸ್ಥಂಭ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಪವಿತ್ರವಾಗಿದ್ದು ಅದನ್ನು ಚಲಾವಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಜೆಎಂಎಫ್ಸಿ ನ್ಯಾಯಾಧೀಶ ಅಜಿತ್ ದೇವರಮನೆ ಅಭಿಪ್ರಾಯಪಟ್ಟರು
ಬಂಗಾರಪೇಟೆ: ಪಟ್ಟಣದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಚುನಾವಣಾ ಆಯೋಗ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮತದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಪ್ರಜಾಪ್ರಭುತ್ವದ ವ್ಯವಸ್ಥೆಯ ತಲಹದಿಯಾಗಿದೆ. ಮತದಾರರು ಅಜಾಗೃಕತೆಯಿಂದ ಆಸೆ ಆಮಿಷ, ಜಾತಿ ವ್ಯವಸ್ಥೆಯ ಮೌಢ್ಯಕ್ಕೆ ಒಳಗಾಗಿ ಮತ ಚಲಾಯಿಸಿದರೆ ಶಾಸಕಾಂಗ ಸಭೆಗೆ ಭೂಗಳ್ಳರು, ಭ್ರಷ್ಟರು, ಗಣಿಮಾಫಿಯಾದವರು ಅಧಿಕಾರಕ್ಕೆ ಬರುತ್ತಾರೆ, ಆಗ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅದೋಗತಿಗೆ ತಲುಪುತ್ತದೆ, ಒಂದು ದೇಶದ ಪ್ರಗತಿ ಅಲ್ಲಿನ ಮತದಾರ ಸಮುದಾಯವನ್ನು ಅವಲಂಬಿಸಿದ್ದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.
ಬಲವಾದ ಪ್ರಜಾಪ್ರಭುತ್ವಕ್ಕಾಗಿ ಮತದಾನ:
ನ್ಯಾಯಾಧೀಶ ಕೇಶವಮೂರ್ತಿ ಮಾತನಾಡಿ 1950 ಜನವರಿ 25ರಲ್ಲಿ ಭಾರತೀಯ ಚುನಾವಣಾ ಆಯೋಗ ಸ್ಥಾಪನೆಯಾಯಿತು ಅದರ ಸ್ಮರಣಾರ್ಥವಾಗಿ ಮತದಾರರಲ್ಲಿ ಜಾಗೃತಿಯನ್ನು ಮೂಡಿಸಿ ಬಲಿಷ್ಠ, ಸುಭದ್ರ, ರಾಷ್ಟ್ರ ನಿರ್ಮಾಣಕ್ಕಾಗಿ ಅಂತರಾಷ್ಟ್ರೀಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.
ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ನೀಡಲಾಗಿದೆ ಬಲಿಷ್ಠ ಸುಭದ್ರ ರಾಷ್ಟ್ರವನ್ನು ನಿರ್ಮಿಸಲು ಮತದಾನ ಪ್ರಮುಖ ಅಸ್ತ್ರವಾಗಿದ್ದು ದೃಢ ಸಂಕಲ್ಪ ದೊಂದಿಗೆ ದೇಶವನ್ನು ಆರ್ಥಿಕ, ಸಾಮಾಜಿಕ, ಔದ್ಯೋಗಿಕವಾಗಿ, ವೈಜ್ಞಾನಿಕವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತತೆಯಿಂದ ಮತದಾನ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ,ಇ ಓ ರವಿಕುಮಾರ್, ಬಿಇಓ ಸುಕನ್ಯಾ, ಪುರಸಭೆ ಮುಖ್ಯ ಅಧಿಕಾರಿ ಮೀನಾಕ್ಷಿ, ಸಿಡಿಪಿಓ ಮುನಿರಾಜು, ಪ್ರಾಂಶುಪಾಲರಾದ ಸುಬ್ರಮಣಿ, ಶಂಕರಪ್ಪ, ನಲ್ಲೂರಪ್ಪ, ವಕೀಲ ಸಂಘದ ಅಧ್ಯಕ್ಷ ಎಸ್ ನಾರಾಯಣಪ್ಪ, ಸಿರಸ್ದಾರ್ ಚಂದ್ರಶೇಖರ್, ಆರ್ ಐ ಅಜಯ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಿವು ಇತರರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ