“ವಕ್ಛ್ ಬೋರ್ಡ್ ಭೂಮಿ ಎಂದು ನಮೂದಿಸುತ್ತಿರುವುದು ಮುಸ್ಲೀಂ ತುಷ್ಟೀಕರಣದ ಪರಮಾವಧಿ”
(CHIKKAMAGALURU): ರೈತರ ಪಹಣಿಗಳಲ್ಲಿ ವಕ್ಛ್ ಬೋರ್ಡ್ ಭೂಮಿ ಎಂದು ನಮೂದಿಸುತ್ತಿರುವುದು ಮುಸ್ಲೀಂ ತುಷ್ಟೀಕರಣದ ಪರಮಾವಧಿ, ರಾಜ್ಯದ ಕಾಂಗ್ರೇಸ್ ನೇತೃತ್ವದ ಸರ್ಕಾರ ಈ ಹಿಂದೆ ತನ್ನ ಮತ ಭದ್ರ ಪಡಿಸಿಕೊಳ್ಳಲು ಒಂದು ಜನಾಂಗಕ್ಕೆ ಆಸೆ ಆಮಿಷಗಳನ್ನು ಇಟ್ಟು ಆಟವಾಡುತ್ತಿರುವುದು ಮೊದಲೇನಲ್ಲ ಆದರೇ ಈ ಬಾರಿ ಇಡೀ ರೈತಾಪಿ ವರ್ಗಕ್ಕೆ ಮುಳುವಾಗುವಂತ ಕಾಯ್ದೆಯನ್ನು ಕೇವಲ ಮಂತ್ರಿಮಂದಲದಲ್ಲಿರುವ ಬುದ್ದಿ ಹೀನ ಮಂತ್ರಿ ಜಹೀರ್ ಅಹಮ್ಮದ್ ಮಾತು ಕೇಳಿ ಅನುಷ್ಠಾನ ಗೊಳಿಸುತ್ತಿರುವುದು ಬಹುಸಂಖ್ಯಾತ ಹಿಂದುಗಳಿಗೆ ಕಾಂಗ್ರೇಸ್ ಮಾಡುತ್ತಿರುವ ಅನ್ಯಾಯ ಎಂದು ಬಿಜೆಪಿ ವಕ್ತಾರ ಜಗದೀಶ್ಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಲವು ತಲೆಮಾರುಗಳಿಂದ ಜಮೀನಲ್ಲಿ ಕೃಷಿ ಮಾಡುತ್ತಾ ಬಂದಿರುವ ರೈತರ ಪಹಣಿಯ ಕಾಲಂ ನಂಬರ್ 9 ಮತ್ತು 11 ರಲ್ಲಿ ವಕ್ಛ್ ಬೊರ್ಡ್ ಭೂಮಿ ಎಂದು ನಮೂದಿಸುತ್ತಿರುವುದು ಅತಂಕಕಾರಿ ಬೆಳವಣಿಗೆ. ಈ ನಿರ್ಣಯದ ಹಿಂದೆ ಸಚಿವ ಜಮೀರ್ ಅಹಮ್ಮದ್ ರವರು ಮುಂಚುಣಿಯಲ್ಲಿ ನಿಂತು ಕೆಲಸಮಾಡುತ್ತಿರುವುದು ಇದರ ಹಿಂದೆ ಲ್ಯಾಂಡ್ ಜಿಹಾದ್ ನ ಹುನ್ನಾರ ಮತ್ತು ದೇಶದ್ರೋಹಿ ಶಕ್ತಿಗಳ ಕಾಣದ ಕೈ ಕೆಲಸಮಾಡುತ್ತಿರಬಹುದೆಂಬ ಅನುಮಾನ ಕಾಡದೇ ಇರದು. ಅಲ್ಲದೇ ಸಚಿವ ಜಮೀರ್ ಅಹಮ್ಮದ್ ರವರ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿದ್ದು ಅವರು ಮುಸ್ಲೀಂ ಅಲ್ಲದ ಇತರರರನ್ನು ಸೈತಾನನೆಂದು ಕರೆದಿದ್ದಲ್ಲದೇ ಆಸ್ತಿಗಳ ಮೇಲೆ ಹಸಿರು ಬಣ್ಣ ರಾರಾಜಿಸಬೇಕೆಂದು ಹಲ್ಲು ಕಚ್ಚಿ ಹೇಳುವ ದುರ್ವರ್ತನೆ, ಅಲ್ಲದೇ ರೈತರ ಪಹಣಿಯಲ್ಲಿ ವಕ್ಛ್ ಭೂಮಿ ಎಂದು ನಮೂದಿಸುವಂತೆ ತನ್ನ ಪ್ರಭಾವ ಬಳಸಿ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಆದೇಶಿಸಿರುವುದು ಭಾರತೀಯ ಸಂವಿದಾನಕ್ಕೆ ವಿರುದ್ಧವಾದುದ್ದು ಹಾಗಾಗಿ ಕೂಡಲೇ ಜಮೀರ್ ಅಹಮ್ಮದ್ ರವರನ್ನು ಸಂಪುಟದಿಂದ ಕೈ ಬಿಡಬೇಕು ಅಲ್ಲದೇ ಉನ್ನತಮಟ್ಟದ ತನಿಖೆಯಾಗಬೇಕು.
ಇಲ್ಲಿಯ ಮೂಲ ನಿವಾಸಿಗಳಲ್ಲದ ಹಾಗೂ ಆಸೇ ಆಮಿಷಗಳಿಗೆ ಮತಾಂತರವಾದ ಒಂದು ವರ್ಗವನ್ನು ಇಲ್ಲಿನ ರಾಜಕಾರಣಿಗಳು ಓಟ್ ಬ್ಯಾಂಕ್ ಆಸೆಗೆ ಬಳಸುತ್ತಿರುವುದು ದೇಶದ ಭದ್ರತೆಗೆ ಆತಂಕಕಾರಿ ಬೆಳವಣಿಗೆ ಹಾಗಾಗಿ ಯಾವ ಜಾತಿಗೂ ಇಲ್ಲದ ಸೌಲಭ್ಯಗಳನ್ನು ಒಂದು ಜಾತಿಗೆ ಮೀಸಲು ಇಡುವುದು ಇನ್ನೂ ಆತಂಕಕಾರಿ ಬೆಳವಣೀಗೆ ಹಾಗಾಗಿ ರಾಜ್ಯದಲ್ಲಿ ಮತ್ತು ದೇಶದಾದ್ಯಂತ ಏಕರೂಪ ನಾಗರೀಕ ಕಾಯ್ದೆಯನ್ನು ಶೀಘ್ರ ಅನುಷ್ಠಾನಕ್ಕೆ ತರಬೇಕು ಎಂದು ಜಗದೀಶ್ಚಂದ್ರ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.