ಮಳೆ ರಭಸಕ್ಕೆ ಮನೆಗಳಿಗೆ ನುಗ್ಗಿದ ನೀರು – ನಿವಾಸಿಗಳ ಪರದಾಟ – ಜಲಾವೃತಗೊಂಡ ಬಸ್ ನಿಲ್ದಾಣ
(KOLARA): ಬಂಗಾರಪೇಟೆ ; ಇಂದು ರಾತ್ರಿ 8 ಗಂಟೆ ಸುಮಾರಿಗೆ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿ ವಾಸ ಮಾಡುತ್ತಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ.ರಾತ್ರಿ 8 ಗಂಟೆಗೆ ಪ್ರಾರಂಭವಾಗಿ 9 ಗಂಟೆ ವರೆಗೆ ಸುರಿದ ರಭಸ ಮಳೆಗೆ ಸೇಟ್ ಕಾಂಪೌಂಡ್, ಮುನಿಯಮ್ಮ ಲೇ ಔಠ್, ಬಸ್ ನಿಲ್ದಾಣ ಜಲಾವೃತಗೊಂಡಿತ್ತು. ಮಬೆಗಳಿಗೆ ನುಗ್ಗಿದ ನೀರಿನಿಂದ ಬಡಾವಣೆ ನಿವಾಸಿಗಳು ನೀರನ್ನು ಹೊರಗಡೆ ಕಳುಹಿಸಲು ಸಾಕಷ್ಟು ಶ್ರಮಿಸಬೇಕಾಯಿತು.ಬಹುತೇಖ ನಿವಾಸಿಗಳು ನೀರಿನ ರಭಸಕ್ಕೆ ಮನೆಗೆ ನುಗ್ಗಿದ ನೀರಿಗೆ ನೀರಿನಲ್ಲೇ ಇಡೀ ರಾತ್ರಿ ಕಾಲ ಕಳೆಯಬೇಕಾಯಿತು. ಬಸ್ ನಿಲ್ದಾಣದಲ್ಲಿ ನೀರು ನುಗ್ಗಿ ವಾಹನಗಳ ಓಡಾಟ ಸುಮಾರು ಅರ್ಧ ಗಂಟೆ ಸ್ಥಿಗಿತಗೊಂಡಿತ್ತು ಅಂದ್ರೆ ಮಳೆ ನೀರಿನ ಆರ್ಭಟ ಊಹೆಗೂ ಮೀರಿದ್ದಾಗಿತ್ತು.
ಇಷ್ಟಾದ್ರು ಮಳೆಯಿಂದ ಅನಾಹುತ ಸಂಬಂದಿಸಿದ ಸ್ಥಳಗಳಿಗೆ ತಹಸೀಲ್ದಾರ್ ರಷ್ಮಿ, ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ ಬೇಟಿ ನೀಡಿ ನಿವಾಸಿಗಳಿಗೆ ಧೈರ್ಯ ತುಂಬಿಸುವ ಕೆಲಸ ಮಾಡದೆ ಇರುವುದು ವಿಷಾಧ ಸಂಗತಿ. ಇತ್ತೀಚೆಗೆ ಮಳೆ ಬಂದಾಗ ಬಸ್ ನಿಲ್ದಾಷ ಜಲಾವೃತಗೊಂಡಿತ್ತು , ಆಗ ಕಾರೋನೇಷನ್ ರಸ್ತೆಯ ಒಂದು ಭಾಗದ ಕಡೆ ಚರಂಡಿ ಕ್ಲೀನ್ ಮಾಡಿದ್ದರು . ಆದ್ರೆ ಮತ್ತೊಂದು ಅಂದ್ರೆ ಬಾಲಚಂದರ್ ಟಾಕೀಸ್ ಕಡೆ ಬರುವ ಚರಂಡಿಯನ್ನು ಕ್ಲೀನ್ ಮಾಡದೆ ಇರುವುದರಿಂದ ನೀರು ಚರಂಡಿ ಒಳಗಡೆ ಹೋಗಲು ಆಗದೆ ರಸ್ತೆಯಲ್ಲಿ ಹರಿದು ಬಸ್ ನಿಲ್ದಾಣ ಜಲಾವೃತಗೊಳ್ಳಲು ಕಾರಣ ಎನ್ನಲಾಗುತ್ತಿದೆ. ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಚರಂಡಿಯಲ್ಲಿ ತುಂಬಿರು ತ್ಯಾಜ್ಯ ಹೊರಗಡೆ ತೆಗೆಯಲು ಮೀನಾ ಮೇಷ ನಡೆಸುತ್ತಿರುವುದರಿಂದ ಬಸ್ನಿಲ್ದಾಣ ಸುರಿಯುವ ಮಳೆಗೆ ಜಲಾವೃತಗೊಳ್ಳುತ್ತಿದೆ ಎಂದು ನಾಗರೀಕರ ಆರೋಪವಾಗಿದೆ. ಸಧ್ಯದ ಪರಿಸ್ಥಿಯಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು ತಗ್ಗು ಪ್ರದೇಶಗಳಿಗೆ ಬೇಟಿ ನಿವಾಸಿಗಳಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಿ ಮನೆಗಳಿಗೆ ಮುತ್ತಿಗೆ ಹಾಕಿತುವ ಮಳೆ ನೀರಿನಿಂದ ಮುಕ್ತಿ ಕೊಡಿಸುವ ಕೆಲಸಕ್ಕೆ ನಿಂತಿರುವುದು ನಿಜಕ್ಕೂ ಶ್ಲಾಘನೀಯ.
ರಾತ್ರಿ ಎಂಟು ಗಂಟೆಯಿಂದ 10 ಗಂಟೆ ಮೇಲೂ ಕರೆಂಟ್ ಇಲ್ಲದೆ ನಾಗರೀಕರು ಕತ್ತಲಲ್ಲಿ ಪರದಾಡಿದ ಘಟನೆಯೂ ನಡೆದಿದೆ.
ಮಳೆ ನೀರಿನಿಂದ ಸಮಸ್ಯೆಗೆ ಒಳಗಾಗಿದ್ದ ನಿವಾಸಿಗಳನ್ನ ಮುಖಂಡ ಕೆ.ಚಂದ್ರಾರೆಡ್ಡಿ ನೇತೃತ್ವದಲ್ಲಿ ಅಕ್ಕಚ್ವಮ್ಮ ಕಲ್ಯಾಣ ಮಂಟಪಕ್ಕೆ ಸ್ಥಳಾಂತಿಸಿ ಕ್ರಮವನ್ನ ತೆಗೆದುಕೊಂಡಿದ್ದಾರೆ.
ರಾತ್ರಿ ಎಂಟು ಗಂಟೆಯಿಂದ 10 ಗಂಟೆ ವರೆಗೆ ಕರೆಂಟ್ ಇಲ್ಲದೆ ಕತ್ತಲಲ್ಲಿ ಪರದಾಡಿದ ಘಟನೆಯೂ ನಡೆದಿದೆ
ಬ್ಲಾಕ್ ಆಗಿದ್ದ ಚರಂಡಿಯನ್ನು ಜೆಸಿಬಿ ಯಂತ್ರದ ಮೂಲಕ ತೆರುವುಗೊಳಿಸಿ ಮಳೆ ನೀರನ್ನ ಹರಿಸುವ ಕೆಲಸ ಮಾಡಲಾಯಿತು.ಸ್ಥಳಕ್ಕೆ ಮಾಜಿ ಪುರಸಭೆ ಅಧ್ಯಕ್ಷರಾದ ಕೆ.ಚಂದ್ರಾರೆಡ್ಡಿ, ಶಂಶುದ್ದೀನ್ ಬಾಬು, ಸದಸ್ಯರಾದ ರಾಖೇಶ್, ಗೋವಿಂದರಾಜ , ಮಾಜಿ ಸದಸ್ಯರಾದ ಶ್ರೀನಿವಾಸಮೂರ್ತಿ ಮತ್ತಿತ್ತರರು ಬೇಟಿ ನೀಡಿ ಪರಿಶೀಲಿಸಿ ವೀಕ್ಷಿಸಿದರು.
ವರದಿ: ವಿಷ್ಣು ಕೋಲಾರ