ಕೋಲಾರನ್ಯೂಸ್

ಪ್ರಾಣಿ, ಪಕ್ಷಿಗಳು ದಾಹ ತೀರಿಸಿಕೊಳ್ಳಲು ಟ್ಯಾಂಕರ್‌ನಿಂದ ನೀರು

ಪ್ರಾಣಿ, ಪಕ್ಷಿಗಳು ದಾಹ ತೀರಿಸಿಕೊಳ್ಳಲು ಟ್ಯಾಂಕರ್‌ನಿಂದ ನೀರು

(KOLARA) ಬಂಗಾರಪೇಟೆ: ಬೇಸಿಗೆ ಆರಂಭದಲ್ಲೇ ಬಿಸಿಲ ತಾಪ ನೆತ್ತಿಗೇರಿತ್ತಿದ್ದು, ಅದರಿಂದ ಪಾರಾಗಲು ಜನ ತತ್ತರಿಸಿ ಹೋಗಿದ್ದಾರೆ. ಇದರ ನಡುವೆ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರಿನ ಸಮಸ್ಯೆ ಎದುರಾಗ ಬಾರದೆಂಬ ಉದ್ದೇಶದಿಂದ ಕರ್ನಾಟಕ ಸಿಂಹ ಘರ್ಜನೆ ವೇದಿಕೆ ರಾಜ್ಯಾಧ್ಯಕ್ಷ ಕಾ.ಶ.ಪ್ರಸನ್ನಕುಮಾರ್ ಸ್ವಾಮಿ ಹಾಗೂ ಇತರೆ ಸಮಾನ ಮನಸ್ಕರ ಸಹಕಾರದಿಂದ ನೀರು ಒದಗಿಸಲು ಮುಂದಾಗಿದ್ದಾರೆ.

ತಾಲೂಕಿನಲ್ಲಿ ಈ ಬಾರಿಯ ಮಳೆಗಾಲದಲ್ಲಿ ಸಮರ್ಪಕ ವಾಗಿ ಮಳೆಯಾಗದ ಕಾರಣ ಕೆರೆ-ಕುಂಟೆಗಳಲ್ಲಿ ನೀರಿಲ್ಲದೆ ಬತ್ತಿ ಹೋಗಿದೆ. ಇದರಿಂದ ದನಕರು, ಪ್ರಾಣಿ-ಪಕ್ಷಿಗಳು ಸೇರಿದಂತೆ ಇತರೆ ಜೀವಿಗಳಿಗೆ ಕುಡಿಯಲು ನೀರಿಲ್ಲದಂ ತಾಗಿದೆ. ಇದರಿಂದ ಕರ್ನಾಟಕ ಸಿಂಹ ಘರ್ಜನೆ ವೇದಿಕೆ ಸಂಘಟನೆಯು ಇತರೆ ಸಮಾನ ಮನಸ್ಕರರ ನೆರವಿನಿಂದ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು ಕೊಡಿಸಲು ಮುಂದಾಗಿರುವುದು ಸ್ವಾಗತರ್ಹವಾಗಿದೆ.

ತಾಲೂಕಿನ ದೊಡ್ಡರು ಕರಪನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಸುತ್ತಲಿರುವ ಬೆಟ್ಟಗುಡ್ಡಗಳು ಸೇರಿದಂತೆ ಇತರೆ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಿಂಕೆಗಳು, ನವಿಲು, ಮೊಲ ಸೇರಿದಂತೆ ಇತರೆ ಪಕ್ಷಿಗಳು ವಾಸವಾಗಿವೆ. ಇವುಗಳಿಗೆ ಬೇಸಿಗೆಯಲ್ಲಿ ಯಾವುದೇ

ರೀತಿಯಲ್ಲಿ ಕುಡಿಯಲು ನೀರಿನ ಸಮಸ್ಯೆ ಉಂಟಾ ಗಬಾರದು ಎಂಬ ಉದ್ದೇಶದಿಂದ ಸಮಾನ ಮನಸ್ಕರರ ಸಹಕಾರದಿಂದ ನೀರು ಪೂರೈಸಲಾಗುತ್ತಿದೆ.

ತಾತ್ಕಾಲಿಕ ಸಿಮೆಂಟ್ ತೊಟ್ಟಿ ನಿರ್ಮಾಣ: ಕರ್ನಾಟಕ ಸಿಂಘ ಘರ್ಜನೆ ವೇದಿಕೆಯ ಅಧ್ಯಕ್ಷ ಕ.ಶಾ. ಪ್ರಸನ್ನಕುಮಾರ ಸ್ವಾಮಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಸಮರ್ಪಕ ಮಳೆ ಇಲ್ಲದೇ ಕೆರೆ-ಕುಂಟೆಗಳು ಬತ್ತಿ ಹೋಗಿವೆ. ಇದಲ್ಲದೇ ರೈತರು ತಮ್ಮ ತೋಟಗಳಿಗೆ ಡ್ರಿಪ್‌ಗಳ ಮೂಲಕ ನೀರು ಹಾಯಿಸುವುದರಿಂದ ಬಿಸಲಿನ ಬೇಗೆಯಿಂದ ತತ್ತರಿ ಸುತ್ತಿರುವ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಅಭಾವ ವಾಗುತ್ತಿದ್ದು, ಇದರಿಂದ ತಾತ್ಕಾಲಿಕವಾಗಿ ಸಿಮೆಂಟ್‌ ತೊಟ್ಟಿ ನಿರ್ಮಾಣ ಮಾಡಿ ಖಾಸಗಿ ವ್ಯಕ್ತಿಗಳಿಗಳಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ ಎಂದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code