ಕಷ್ಟಪಟ್ಟು ಸಾಲ ಮಾಡಿ ದೇಶದ ಜನರಿಗೆ ಆಹಾರ ನೀಡುತ್ತಿದ್ದೇವೆ ನಮ್ಮ ಬಗ್ಗೆ ಧ್ವನಿ ಎತ್ತುವವರಿಲ್ಲ.
(SHIVAMAOGA): ಸಾಗರ ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಶಿವಮೊಗ್ಗ ಇವರ ವತಿಯಿಂದ ತಾಳಗುಪ್ಪ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಜಾಥಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರಾಜ್ಯ ರೈತ ಸಂಘದ ರಾಜ್ಯಾದ್ಯಕ್ಷರಾದ ಬಡಗಲ ನಾಗೇಂದ್ರ ಪಾಲ್ಗೊಂಡು ರಾಜ್ಯದಲ್ಲಿ ಹಾಗೂ ದೇಶದಲ್ಲಿ ಶೇಕಡಾ 60% ರೈತರು ಇದ್ದೀವಿ ಆದರೆ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಯಾರು ಧ್ವನಿ ಎತ್ತುವವರಿಲ್ಲ ಆದರೆ ನಾವು ಕಷ್ಟಪಟ್ಟು ಸಾಲ ಮಾಡಿ ದೇಶದ ಜನರಿಗೆ ಅಹಾರ ನೀಡುತ್ತಾ ಬಂದಿದ್ದು ಇನ್ನು ಆದರು ನಮ್ಮ ಮಾತು ಕೇಳುವ ಸರಕಾರ ಬರಬೇಕು ನಮ್ಮ ನೋವು ನಲಿವು ನಮ್ಮ ಜೊತೆಗೆ ನಿಲ್ಲುವ ಸರಕಾರ ರಚನೆ ಮಾಡಬೇಕು ಆ ಉದ್ದೇಶದಿಂದ ಇಂದು ರಾಜ್ಯದ ಮೂಲೆ ಮೂಲೆಗಳಲ್ಲಿ ನಾವು ಪ್ರಚಾರ ಮಾಡ್ತಾ ಇದ್ದು ಅದಕ್ಕೆ ಸಾರ್ವಜನಿಕರು ತುಂಬಾ ಬೆಂಬಲವನ್ನು ನೀಡಿದ್ದಾರೆ ಎಂದರು.
ವೇದಿಕೆಯಲ್ಲಿ ಶಿವಾನಂದ ಕುಗ್ವೆ, ವಸಂತ ಕುಮಾರ್, ಹೆಚ್.ಬಿ.ರಾಘವೇಂದ್ರ, ಜೋಸೆಫ್, ಮನೊಜ್ ಕುಗ್ವೆ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ