ಕೋಲಾರನ್ಯೂಸ್

ಲುಚ್ಚ-ರೌಡಿಶೀಟರ್ ಮಿಸ್ಟರ್ ಅಮಿತ್‌ಷಾ ರವರೇ ದೇವರನ್ನು ಪೂಜೆ ಮಾಡಿದರೆ ನಾವು ಸ್ವರ್ಗಕ್ಕೂ ಹೋಗುವುದಿಲ್ಲ

ಲುಚ್ಚ-ರೌಡಿಶೀಟರ್ ಮಿಸ್ಟರ್ ಅಮಿತ್‌ಷಾ ರವರೇ ದೇವರನ್ನು ಪೂಜೆ ಮಾಡಿದರೆ ನಾವು ಸ್ವರ್ಗಕ್ಕೂ ಹೋಗುವುದಿಲ್ಲ

(KOLARA): ಬಂಗಾರಪೇಟೆ: ಲುಚ್ಚ-ರೌಡಿಶೀಟರ್ ಮಿಸ್ಟರ್ ಅಮಿತ್‌ಷಾ ರವರೇ ದೇವರನ್ನು ಪೂಜೆ ಮಾಡಿದರೆ ನಾವು ಸ್ವರ್ಗಕ್ಕೂ ಹೋಗುವುದಿಲ್ಲ, ಒಂದೊತ್ತು ಊಟವೂ ಸಿಗುವುದಿಲ್ಲ,  ನಿಮ್ಮಂಥವರು ಬಿ.ಜೆ.ಪಿ ಮತ್ತು ಆರ್.ಎಸ್.ಎಸ್ ನ ಮುಖಾಂತರ ಸಮಾಜದಲ್ಲಿ ಕಿಡಿಗೇಡಿಗಳಾಗಿ ಬರುತ್ತಾರೆ, ನೀವು ಈ ದೇಶಕ್ಕೆ ಮಾರಕವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿ ಕೇಂದ್ರದ ಗೃಹಮಂತ್ರಿ ಅಮಿತ್‌ಷಾ ಮತ್ತು ಬಿ.ಜಿ.ಪಿ ಪಕ್ಷದ ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು, ಗೃಹಮಂತ್ರಿ ಅಮಿತ್ ಷಾ ರವರು ಲೋಕಸಭೆಯಲ್ಲಿ ಭಾರತದ ಜನರು ಅಂಬೇಡ್ಕರ್ ಸ್ಮರಣೆ ಮಾಡುವುದನ್ನ ಬಿಟ್ಟು ದೇವರ ಸ್ಮರಣೆ ಮಾಡಿದರೆ ಸ್ವರ್ಗಕ್ಕೆ ಹೋಗುತ್ತಾರೆಂಬ ಜನವಿರೋದಿ ಮಾತುಗಳನ್ನ ಮಾತನಾಡಿದ್ದಾರೆ. ಭಾರತ ದೇಶದ 160 ಕೋಟಿ ಜನ ಅಂಬೇಡ್ಕರ್ ಸ್ಮರಣೆ ಮಾಡುತ್ತಿರುವದರಿಂದಲೇ ಸಮಾಜದಲ್ಲಿ ಎಲ್ಲರಂತೆ ಸರಿಸಮಾನರಾಗಿ ಬಾಳಲು ಸಾದ್ಯವಾಗುತ್ತಿದೆ.

ಅಂಬೇಡ್ಕರ್‌ರವರ ಸಂವಿದಾನ ಇಲ್ಲವೆಂದಿದ್ದರೆ ಅಮಿತ್‌ಷಾ ಎಂಬ ನಾಯಿಗಳ ಬಳಿ ಜೀತಕ್ಕಿರುವುದಲ್ಲದೆ ಉಳ್ಳವರ ಮನೆ ಬಾಗಿಲನ್ನು ಕಾಯಬೇಕಾಗಿತ್ತು. ಸಂವಿದಾನ ಜಾರಿಗೆ ಬರುವುದಕ್ಕೂ ಮುನ್ನ  ಒಪ್ಪತ್ತಿನ ಊಟಕ್ಕೆ, ಕೆಲಸಕಾರ್ಯಗಳಿಲ್ಲದೆ, ದರಿಸಲು ಬಟ್ಟೆಗಳಿಲ್ಲದೆ ಉಳ್ಳವರ ಬಳಿ ಗುಲಾಮರಂತೆ ಬದುಕುತ್ತಿದ್ದ ದಿನಗಳನ್ನು ಯಾರು ಮರೆಯಬಾರದು. ಇವುಗಳೆಲ್ಲವನ್ನೂ ಹೋಗಲಾಡಿಸಬೇಕೆಂಬ ಉದ್ದೇಶದಿಂದ ಜಾತಿ ಭೇದ ಭಾವವನ್ನು ನೋಡದೆ, ತುಳಿತಕ್ಕೊಳಗಾಗಿರುವವರ ರಕ್ಷಣೆ ಮಾಡಬೇಕೆಂದು ಭಾರತದ ಸಂವಿದಾನವನ್ನು ಬರೆದು ಇಂದು ನಮ್ಮೆಲ್ಲರ ರಕ್ಷಣೆಗೆ ನಿಂತಿದ್ದಾರೆಂದು ತಿಳಿಸಿದರು.

ಬ್ರಹ್ಮ ಯೇಸು, ಅಲ್ಲಾ, ಬುದ್ದ ಇವರುಗಳ ರೂಪದಲ್ಲಿ  ಈ ಭೂಮಿಯಲ್ಲಿ ಜನ್ಮ ತಾಳಿರುವ ಸಂವಿದಾನದ ಮಹಾಪುರುಷ ಅಂಬೇಡ್ಕರ್‌ರವರು. ಅವರ ಸಂವಿಧಾನದಿಂದ ಇಂದು ನಾವೆಲ್ಲರೂ ಸಮಾನತೆ ಕಾಣುತ್ತಿದ್ದೇವೆ. ರಾಜಕಾರಣಿಗಳಾಗಿದ್ದೇವೆ, ಅಧಿಕಾರಿಗಳಾಗಿಗಿದ್ದೇವೆೆ, ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ್ದಾರೆ, ವ್ಯಪಾರಸ್ಥರಾಗಿದ್ದಾರೆ, ಇಂತಹ ಮಹಾನಾಯಕ ನೀಡಿರುವ ಸಂವಿಧಾನದಲ್ಲಿ ಗೃಹಮಂತ್ರಿಯಾಗಿರುವ ಒಬ್ಬ ಲುಚ್ಚ, ರೌಡಿಶೀಟರ್‌ನಿಂದ ಸಂವಿದಾನಕ್ಕೆ ನಾಚಿಕೆಗೇಡಾಗುತ್ತದೆ. ಆರ್.ಎಸ್.ಎಸ್‌ನ ಸಂವಿಧಾನ ವಿರೋದಿ, ಜನವಿರೋದಿ, ಬಡವರ ವಿರೋದಿ, ದಲಿತರ ವಿರೋದಿ ಅಮಿತಾ ಷಾ ಹೇಳಿಕೆಯನ್ನು ನಾವೆಲ್ಲರೂ ಖಂಡಿಸುತ್ತೇವೆಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಸಂವಿದಾನವನ್ನು ದೂಷಣೆ ಮಾಡುತ್ತಿರುವವರು ಕೇಂದ್ರದ ಬಿ.ಜೆ.ಪಿ ಮತ್ತು ಆರ್.ಎಸ್.ಎಸ್ ನ ಮುಖಾಂತರ ಸಮಾಜದಲ್ಲಿ ಕಿಡಿಗೇಡಿಗಳಾಗಿ ಬರುತ್ತಾರೆ. ಭಾರತದ ಸಂವಿದಾನವನ್ನು, ಪ್ರಜಾಪ್ರಭುತ್ವವನ್ನು, ನನ್ನನ್ನು ಮತ್ತು ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬೇಕಾದರೆ ಇಂತಹ ಗೂಂಡಾಗಳನ್ನು ದೂರವಿಡಬೇಕಾಗುತ್ತದೆ. ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಕೋಲಾರ ಮುಖ್ಯರಸ್ತೆಯಲ್ಲಿ ಅಮಿತ್ ಷಾ ವಿರುದ್ದ ಮತ್ತು ಬಿ.ಜೆ.ಪಿ ವಿರುದ್ದ ದಿಕ್ಕಾರಗಳನ್ನು ಕೂಗುತ್ತಾ ಅಮಿತ್‌ಷಾ ಪ್ರತಿಮೆಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಈ ಸಂಧರ್ಭದಲ್ಲಿ ಬಂಗಾರಪೇಟೆ ಬ್ಲಾಕ್ ಕಾಂಗ್ರೇಸ್‌ನ ನಗರಾದ್ಯಕ್ಷ ಚಂದ್ರಕುಮಾರ್, ಪಾರ್ಥಸಾರಥಿ, ಶಂಶುದ್ದಿನ್ ಬಾಬು, ಎಲ್ಲಾ ಕಾಂಗ್ರೇಸ್ ಪುರಸಭಾ ಸದಸ್ಯರುಗಳು, ಕುಪೇಂದ್ರ ರಮೇಶ್, ಬೂದಿಕೋಟೆ ನಾಗರಾಜ್, ಮನಿವಣ್ಣನ್, ಹರೀಶ್, ರಂಗರಾಮಯ್ಯ,ಗ್ರಾಮ ಪಂಚಾಯ್ತಿ ಅದ್ಯಕ್ಷರುಗಳು ಮತ್ತು ಸದಸ್ಯರು ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code