Newsಚಿಕ್ಕಮಗಳೂರು

“ಇರಾಕ್ ನ ಬಾಗ್ದಾದ್ ನ  ಗ್ಯಾರವಿ ಗೂ ದತ್ತಪೀಠಕ್ಕೂ ಏನು ಸಂಬಂಧ?”- ಆರ್ ಡಿ ಮಹೇಂದ್ರ

“ಇರಾಕ್ ನ ಬಾಗ್ದಾದ್ ನ  ಗ್ಯಾರವಿ ಗೂ ದತ್ತಪೀಠಕ್ಕೂ ಏನು ಸಂಬಂಧ?”- ಆರ್ ಡಿ ಮಹೇಂದ್ರ


(CHIKKAMAGALURU): ಕೋರ್ಟ್ ಆದೇಶ ಉಲ್ಲಂಘಿಸಿ ದತ್ತ ಪೀಠದಲ್ಲಿ ಟಿಪ್ಪು ಚಾರಿಟಬಲ್ ಟ್ರಸ್ಟ್ ನವರು ಇರಾಕ್ ನಲ್ಲಿರುವ ಬಾಗ್ದಾದ್ ನಲ್ಲಿರುವ ಗೌಸೇ ಪಾಕ್  ಗೋರಿ ಯ ಹೆಸರಲ್ಲಿ  ಗ್ಯಾರವಿ ಆಚರಿಸಿ ದತ್ತ ಪೀಠದ ಪವಿತ್ರ ಕ್ಷೇತ್ರದಲ್ಲಿ ನೂರಾರು ಕುರಿಗಳನ್ನು ಬಲಿಕೊಟ್ಟು ಮಾಂಸಹಾರ ಅಡುಗೆ ಮಾಡಿ, ಸಾವಿರಾರು ಜನ ಮೆರವಣಿಗೆ ಮುಖಾಂತರ ಗರ್ಭ ಗುಡಿ ಪ್ರವೇಶಿಸಿ ಹಿಂದುಗಳ ಧಾರ್ಮಿಕ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದು ಅಕ್ಷಮ್ಯ ಅಪರಾದ ಹಾಗಾಗಿ ದತ್ತಪೀಠದೊಳಗೆ ಹಾಗೂ ಸಂಪೂರ್ಣ ದತ್ತ ಪೀಠ ಅಪವಿತ್ರವಾಗಿದ್ದು ಜಿಲ್ಲಾಧಿಕಾರಿಗಳು ಮತ್ತು ಮುಜರಾಯಿ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಈ ಘಟನೆ ನೆಡೆದಿದ್ದು ಇನ್ನೂ ಒಂದು ತಿಂಗಳ ಒಳಗಾಗಿ ಜಿಲ್ಲಾಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ವಿಶ್ವ ಹಿಂದೂ ಪರಿಷತ್ ನಿಂದ ದತ್ತಪೀಠದಲ್ಲಿರುವ ಔದುಂಭರ ಮರದ ಕಟ್ಟೆ ಶುದ್ಧೀಕರಣ ಮತ್ತು ಕಾರ್ಯಕರ್ತರ ಪ್ರದಕ್ಷಿಣೆ ಕಾರ್ಯಕ್ರಮ ಹಮ್ಮಿಕೊಂಡು ಮುಂದಿನ ದಿನಗಳಲ್ಲಿ ದತ್ತ ಪೀಠದಲ್ಲಿ ನಮ್ಮ ಹಿಂದೂ ಧರ್ಮದ ಶ್ರದ್ಧಾ ಹಬ್ಬವಾದ ಹೋಳಿ ಆಚರಣೆಯನ್ನು ಮಾಡಲಾಗುವುದೆಂದು ಆರ್ ಡಿ ಮಹೇಂದ್ರ ತಿಳಿಸಿದ್ದಾರೆ.


ಈಗಾಗಲೇ ಮಾನ್ಯ ಘನವೆತ್ತ ಕೋರ್ಟ್ ತಿಳಿಸಿದಂತೆ ಯಾವುದೇ ಹೊಸ ಆಚರಣೆ ಮಾಡಡೇ ಯಥಾಸ್ಥಿತಿ ಕಾಪಾದಿಕೊಂದು ಬರಬೇಕೆಂದು ಮತ್ತು ದತ್ತ ಪೀಠದ ಆವರಣದಲ್ಲಿ ಯಾವುದೇ ಮಾಂಸಾಹಾರದ ನಿಷೇದವಿದ್ದರೂ, ಕರ‍್ಟ್ ಅದೇಶದಂತೆ ಆಗಮ ಪದ್ಧತಿಯ ಪ್ರಕಾರ ಹಿಂದೂ ಅರ್ಚಕರು ದಿನನಿತ್ಯ ಪೂಜಾ ಕೈಕಂರ್ಯಗಳನ್ನು ನೆಡೆಯುವ ಸ್ಥಳದಲ್ಲಿಯೇ ಈ ರೀತಿಯ ಹೊಸ ಆಚರಣೆಗೆ ಜಿಲ್ಲಾಧಿಕಾರಿಗಳು ಮತ್ತು ಮುಜರಾಯಿ ಅಧಿಕಾರಿಗಳು ಬೆನ್ನೆಲುಬಾಗಿ ನಿಂತು ಹೊಸ ಆಚರಣೆಯನ್ನು ಆರಂಬಿಸಿದ್ದಲ್ಲದೇ ಮುಜರಾಯಿ ಇಲಾಖೆಗೆ ಸಂಬಂಧಪಟ್ಟಂತಹ ದತ್ತಾತ್ರೇಯ ದೇವರ ಹೆಸರಿನಲ್ಲಿ ಇರುವಂತ ಪ್ರದೇಶದಲ್ಲಿ ಜಿಲ್ಲಾಡಳಿತದ ಮೌಕಿಕ ಅನುಮತಿಯಂತೆ ಸಾವಿರಾರು ಜನರಿಗೆ ಸಾಕಾಗುವಷ್ಟು ಶಾಮಿಯಾನದ ಪೆಂಡಾಲ್ ಹಾಕಿ ಹಲವಾರು ಪ್ರಾಣಿಗಳ ಮಾರಣಹೋಮ ಮಾಡಿರುವುದು ಸ್ಪಷ್ಟವಾಗಿ ಕೊರ್ಟ್ ಆದೇಶದ ಉಲ್ಲಂಘನೆಯಾಗಿರುತ್ತದೆ.


ಅಲ್ಲದೇ ಈ ಹಿಂದೆ ಟಿಪ್ಪು ಹೆಸರಲ್ಲಿ ರಾಜ್ಯದಲ್ಲಿ ನಡೆದಿರುವ ಅನಾಹುತಗಳನ್ನು ಜನತೆ ಇನ್ನೂ ಮರೆತಿಲ್ಲ ಆದರೇ ಈಗ ಹಜರತ್ ಟಿಪ್ಪು ಚಾರಿಟಬಲ್ ಟ್ರಸ್ಟ್ ಎಂಬ ಹೆಸರಲ್ಲಿ ಒಂದಿಷ್ಟು ಕಿಡಿಗೇಡಿಗಳು ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿ ಮಾಡುವ ಉದ್ದೇಶದಿಂದಲೇ ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಹಾಗೂ ಮುಜರಾಯಿ ಅಧಿಕಾರಿಗಳ ಕುಮ್ಮಕ್ಕಿನಿಂದ ಮಾಡಿರುವುದು ಎಷ್ಟು ಸರಿ? ಅಲ್ಲದೇ ದತ್ತಪೀಠಕ್ಕೂ ಈ ಟಿಪ್ಪೂ ಹೆಸರಿನಲ್ಲಿರುವ ಸಂಘಟನೆಗಳಿಗೂ ಎನೂ ಸಂಬಂಧ ಮತ್ತು ಯಾವ ಉದ್ದೇಶದಿಂದ ಈ ಹೊಸ ಆಚರಣೆ? ಹಾಗಾಗಿ ಈ ಸಂಬಂಧ ಕಾನೂನು ಸುವ್ಯವಸ್ಥೆಯ ಸಲುವಾಗಿ ಜಿಲ್ಲೆಯಲ್ಲಿ ಶಾಂತಿ ನೆಲೆಸುವ ಉದ್ದೇಶದಿಂದ ಈ ಹೊಸ ಸಂಘಟನೆಯ ಕಾರ್ಯಾಚರಣೆ ಬಗ್ಗೆ ತನಿಖೆ ನೆಡಸಬೇಕೆಂದು ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ಮನವಿ ಮಾಡಲಗುವುದೆಂದು ಆರ್ ಡಿ ಮಹೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಾಣಿಕ್ಯಧಾರಕ್ಕೆ ಹೊಗುವ ರಸ್ತೆ ಬಳಿ ಹೊಸ ಘೋರಿ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ:
ಇದುವರೆಗೂ ರಾತ್ರೋರಾತ್ರಿ ಮಣ್ಣಿನ ಗುಡ್ಡೆಗಳಿಗೆ ಹಸಿರು ಬಟ್ಟೆ ತೊಡಿಸಿ ಬೆಳಗಾಗುವುದರೊಳಗೆ ಘೋರಿ ಎಂದು ಕಳ್ಳಾಟವಾಡುತಿದ್ದ ಕೆಲ ಖದೀಮರು ಈಗ ಮಾಣಿಕ್ಯಧಾರಕ್ಕೆ ಹೋಗುವ ರಸ್ತೆ ಬಳಿ ಹೊಸತೊಂದು ಘೋರಿ ನಿರ್ಮಾಣವಾಗಿದ್ದು ಇದುವರೆಗೂ ಜಿಲ್ಲಾಡಳಿತ ಗೊತ್ತಿದ್ದರೂ  ಕಣ್ಣುಮುಚ್ಚಿ ಕುಳಿತಿದೆ ಶೀಘ್ರ ಈ ಅನಧಿಕೃತ ಗೋರಿಯನ್ನು ತೆರವು ಗೊಳಿಸಬೇಕು ತೆರವು ಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಕಾರ್ಯಕರ್ತರೇ ಒಂದೊಂದು ಹಿಡಿ ಮಣ್ಣನ್ನು ತೆಗೆದು ಗೋರಿ ನೆಲಸಮ ಮಾಡುವುದು ನಿಶ್ಚಿತ ಎಂದು ಆರ್ ಡಿ ಮಹೇಂದ್ರ ಎಚ್ಚರಿಸಿದ್ದಾರೆ. ನಮ್ಮ ಹಿಂದೂ ಪರ ಕಾರ್ಯುಕರ್ತರಿಗೆ ಘೋಷಣೆ ಕೂಗಬಾರದು, ಪೂಜೆ ಮಾಡಬಾರದು, ಜಪ ಮಾಡಬಾರದು ಎಂದು ಪತ್ರಿಕಾ ಹೇಳಿಕೆ ಕೊಡುವ ಜಿಲ್ಲಾಧಿಕಾರಿಗಳಿಗೆ ಈ ರೀತಿ ಮಣ್ಣುಗುಡ್ಡೆಗೆ ಹಸಿರು ಬಟ್ಟೆ ಹೊದಿಸಿ ಅನಧಿಕೃತ ಘೋರಿ ನಿರ್ಮಾಣ ಮಾಡಬಾರದು, ಪ್ರಾಣಿ ಬಲಿ ಕೊಡಬಾರದು, ಮಾಂಸಹಾರ ಸೇವನೇ ಮಾಡಬಾರದು, ಗ್ಯಾರವಿ ಹೆಸರಲ್ಲಿ ಕಾರ್ಯಕ್ರಮ ಮಾಡಬಾರದು  ಎಂದು ಏಕೆ ಪತ್ರಿಕಾ ಹೇಳಿಕೆ ನೀಡುವುದಿಲ್ಲ ? ಜಿಲ್ಲಾಧಿಕಾರಿಗಳ ಜಾಣ ಕುರುಡು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರ್ ಡಿ ಮಹೇಂದ್ರ ತಿಳಿಸಿದ್ದಾರೆ.

ಏನಿದು ಗ್ಯಾರವಿ?
ಗ್ಯಾರವಿ ಎಂದರೇ ಇರಾಕ್ ನ ಬಾಗ್ದಾದ್ ನಲ್ಲಿರುವ ಗೌಸೇ ಪಾಕ್ ಎಂಬುವರ ಸಮಾಧಿ ಇದ್ದು ಅವರ ಹೆಸರಲ್ಲಿ ಇರಾಕ್ ನಲ್ಲಿ ಗ್ಯಾರವಿ ಆಚರಣೆ ಜಾರಿಯಲ್ಲಿದ್ದು ಭಾರತದಲ್ಲಿ 3 ಅಥವ ನಾಲ್ಕು ಕಡೆ ಈ ಆಚರಣೆ ಇದ್ದು ಬೇರೆ ಯಾವುದೇ ಮುಸ್ಲಿಂ ದೇಶದಲ್ಲಿ ಈ ಆಚರಣೆ ಇಲ್ಲ. ಅಲ್ಲದೇ ಭಾರತದಲ್ಲಿರುವ ಮುಸಲ್ಮಾನರೂ ಈ ಆಚರಣೆ ಮಾಡುವುದಿಲ್ಲ ಅಲ್ಲದೇ ಈ ಗ್ಯಾರವಿ ಮನೆಯಲ್ಲಿಯೇ ಅಡುಗೆ ಮಾಡಿ ನಂತರ ಬಡ ಜನರಿಗೆ ಹಂಚುವ ಆಚರಣೆ ಆದರೇ ಇಲ್ಲಿ ಹಜರತ್ ಟಿಪ್ಪು ಹೆಸರಲ್ಲಿ ದೇಶದ್ರೊಹಿ ಸಂಘಟನೆಗಳು ಇಲ್ಲಿ ಕೋಮು ಸಾಮರಸ್ಯ ಕದಲುವ ಉದ್ದೇಶದಿಂದಲೇ ಈ ಗ್ಯಾರವಿ ಆಚರಿಸಿದ್ದು, ದತ್ತಪೀಠಕ್ಕೂ ಈ ಗ್ಯಾರವಿ ಆಚರಣೆಗೂ ಏನು ಸಂಬಂದ? ಈ ಸಂಬಂಧ ಏನಾದರೂ ದಾಖಲೆ ಇದೆಯೇ ಇದ್ದರೆ ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆ ನೀಡಲಿ, ಈ ವಿಚ್ಛಿದ್ರಕಾರಿ ಶಕ್ತಿಗಳಿಗೆ ಹೊಸ ಆಚರಣೆಗೆ ಅನುಮಾಡಿಕೊಟ್ಟ ಜಿಲ್ಲಾಧಿಕಾರಿಗಳ ಮೇಲೆ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಆರ್ ಡಿ ಮಹೇಂದ್ರ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

Scan the code