ಕೋಲಾರನ್ಯೂಸ್

ಮೇಷ್ಟ್ರೇ ಇಲ್ಲದ ಶಾಲೆಯಲ್ಲಿ ಪಾಠ ಇನ್ನೇಲ್ಲಿ? ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ  ಚೆಲ್ಲಾಟವಾಡುತ್ತಿದೆಯಾ?

ಮೇಷ್ಟ್ರೇ ಇಲ್ಲದ ಶಾಲೆಯಲ್ಲಿ ಪಾಠ ಇನ್ನೇಲ್ಲಿ? ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರ್ಕಾರ ಹಾಗೂ ಶಿಕ್ಷಣ ಇಲಾಖೆ  ಚೆಲ್ಲಾಟವಾಡುತ್ತಿದೆಯಾ?

(KOLARA): ಕೋಲಾರ : ತಾಲೂಕಿನ ವೇಮಗಲ್ – ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮಕ್ಕಳ ಭವಿಷ್ಯದ ಜೊತೆ ಶಿಕ್ಷಣ ಇಲಾಖೆ ಆಟವಾಡುತ್ತಿದೆಯಾ?

ವೇಮಗಲ್ ಸ. ಪ. ಪೂ. ಕಾಲೇಜು ವಿಭಾಗದ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಿಲ್ಲ, ದೈಹಿಕ ಶಿಕ್ಷಕರಿಲ್ಲ, ಕ್ಲರ್ಕ್ (ಗುಮಸ್ತಾರಿಲ್ಲ) ಹಾಗೂ ಡಿ ಗ್ರೂಪ್ ನೌಕರರಿಲ್ಲ  ಶಾಲೆಯಲ್ಲಿರುವ ಶಿಕ್ಷಕರಿಗೆ ಕೆಲಸದ ಹೊರೆ ಹೆಚ್ಚಾಗಿ ಪಾಠ ಪ್ರವಚನಗಳಿಗೆ ಅಡ್ಡಿಯಾಗುತ್ತಿದೆ ಎಂದು ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೃಷ್ಣಮೂರ್ತಿ ರವರಿಗೆ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ನಾಗರಾಜ್, ದಲಿತ ಮುಖಂಡರಾದ ನಾಗರಾಜ್ ಮನವಿ ಪತ್ರವನ್ನು ನೀಡಿದರು

ಕೋಲಾರ ಜಿಲ್ಲೆಗೆ ಪ್ರಾರಂಭದ ಎರಡನೇ ಶಾಲೆ ಇದಾಗಿದೆ. ವೇಮಗಲ್ ಪಟ್ಟಣವೂ ಬಹು ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬೆಳೆಯುತ್ತಿದೆ ವೇಮಗಲ್ ಗ್ರಾಮ ಪಂಚಾಯಿತಿಯಿಂದ ವೇಮಗಲ್- ಕುರುಗಲ್ ಪಟ್ಟಣ
ಪಂಚಾಯಿತಿಯಾಗಿ ಘೋಷಣೆಯಾಗಿದೆ ಹಾಗೂ ತಾಲೂಕು ಮಟ್ಟದಲ್ಲಿ ಅಭಿವೃದ್ಧಿಯ ಹಾದಿಯಲ್ಲಿದೆ,

ಆದರೆ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗ ಮಾತ್ರ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷಕ್ಕೆ ಸಾಕ್ಷಿಯಾದಂತಿದೆ ಇಂತಹ ಶಾಲೆಗಳಿಗೆ ಈ ಗತಿ ಯಾದರೆ ಬೇರೆ ಶಾಲೆಗಳ ಗತಿ ಏನು ?

ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಈ ಶಾಲೆಯಲ್ಲಿ ಅನೇಕರು ಓದಿ ಉತ್ತಮ ಹುದ್ದೆ ಅಲಂಕರಿಸಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ  ಆದರೆ ಈಗ ಬಡ ಮಕ್ಕಳಿಗಾಗಿ ತೆರೆದಿರುವ ಶಾಲೆಯನ್ನು ಉಳಿಸಿ ಬೆಳೆಸುವ ಬದಲು ತಾತ್ಸಾರ ತೋರುವುದರಿಂದ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಬದಲು ಸಾವಿರಾರು ರೂಪಾಯಿ ಡೊನೇಷನ್ ನೀಡಿ ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ,

ಈ ಶಾಲೆಯಲ್ಲಿ ಮೊದಲು 500ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದರು ಈಗ ಈ ಮಟ್ಟಕ್ಕೆ ಬಂದು ತಲುಪಿದೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ಹಾಗೂ ಶಿಕ್ಷಣ ಸಚಿವರೇ ಗಡಿ ಜಿಲ್ಲೆ ಎಂದು ಇಷ್ಟೊಂದು ತಾತ್ಸಸಾರವೇ ಇತ್ತ ಕಣ್ಣು ಬಿಟ್ಟು ನೋಡಿ  ಹೊಸ ಶಾಲೆಗಳನ್ನು ಪ್ರಾರಂಭಿಸುವುದಲ್ಲ ಇರುವ ಶಾಲೆಗಳಿಗೆ ಮೂಲಭೂತ ಸೌಕರ್ಯಗಳು ಹಾಗೂ ಶಿಕ್ಷಕರ ಕೊರತೆಯನ್ನು ನೀಗಿಸಿ ಬಡ ಮಕ್ಕಳ ಉಜ್ವಲ ಭವಿಷ್ಯವನ್ನು  ರೂಪಿಸಿ ಎಂದು ಸಾರ್ವಜನಿಕರು ಪೋಷಕರು ಪಾಲಕರು ಅಗ್ರಹಿಸುತ್ತಿದ್ದಾರೆ.


ಶಾಲೆ ಪ್ರಾರಂಭವಾಗಿ ಸುಮಾರು ತಿಂಗಳುಗಳೇ ಕಳೆದಿದೆ ಆದರೆ ನಮ್ಮ ಶಾಲೆಯಲ್ಲಿ  ಹಿಂದಿ ಶಿಕ್ಷಕರೆ ಇಲ್ಲ ಬಡ ಮಕ್ಕಳ ಬಗ್ಗೆ ಇಷ್ಟೊಂದು ತಾತ್ಸಾರವೇಕೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಸಮಸ್ಯೆ ಬಗೆಹರಿದಿಲ್ಲ  ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಇಲ್ಲವಾದರೆ  ಮಕ್ಕಳ ಹಾಗೂ ಪೋಷಕರ ಜೊತೆಗೂಡಿ ಗೇಟಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದರು

ಎಸ್ ಡಿ ಎಂ ಸಿ ಅಧ್ಯಕ್ಷ
ನಾಗರಾಜ್


ದಿನಾಂಕ 30ಬುಧವಾರ ಎಷ್ಟೇ ಕೆಳಗಳಿದ್ದರೂ ನಾನೇ ಶಾಲೆಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಸಮಸ್ಯೆಯನ್ನು ಬಗೆ ಹರಿಸುತ್ತೇನೆ
ಕೃಷ್ಣಮೂರ್ತಿ
ಉಪನಿರ್ದೇಶಕರು
ಸಾರ್ವಜನಿಕ ಶಿಕ್ಷಣ ಇಲಾಖೆ ಕೋಲಾರ

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code