ಚಿಕ್ಕಮಗಳೂರುನ್ಯೂಸ್

ತಂದೆ ಮರ ಕಡಿಯುವಾಗ  ಆಕಸ್ಮಿಕವಾಗಿ ಮರ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ಮಗ..!

ತಂದೆ ಮರ ಕಡಿಯುವಾಗ  ಆಕಸ್ಮಿಕವಾಗಿ ಮರ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ಮಗ..!

(CHIKKAMAGALURU):ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗುಡ್ಲು ಎಸ್ಟೇಟ್ ನಲ್ಲಿ ಮರ ಕಡಿಯುವಾಗ ಯುವಕನ ಮೇಲೆ ಮರ ಬಿದ್ದು ಯುವಕ ಮರಣ ಹೊಂದಿರುವ  ಘಟನೆ ನಡೆದಿದೆ.

ತಂದೆ ಮತ್ತು ಮಗ ಇಬ್ಬರು ಕೇರಳದಿಂದ ಟಿಂಬರ್ ಮರ ಕಡಿಯುವ ಕೆಲಸಕ್ಕೆ ಬಂದಿದ್ದು, ತಂದೆ ಮರ ಕಡಿಯುವ ಸಮಯದಲ್ಲಿ ಮಗನ ತಲೆ ಮೇಲೆ ಮರ ಬಿದ್ದು ಮಗ ಸ್ಥಳದಲ್ಲೇ  ದುರ್ಮರಣ ಹೊಂದಿದ್ದಾನೆ. ಮೃತ ವ್ಯಕ್ತಿಯನ್ನು ಅಬ್ದುಲ್ ಅಜೀಜ್ (20)ಎಂದು ಗುರುತಿಸಲಾಗಿದೆ.
ಪ್ರಕರಣವನ್ನು ಬಾಳೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

Scan the code