ಆಕಸ್ಮಿಕ ಅವಘಡಗಳಿಗೆ ಹೊಣೆ ಯಾರು: ಮಂಜುನಾಥ್
ಆಕಸ್ಮಿಕ ಅವಘಡಗಳಿಗೆ ಹೊಣೆ ಯಾರು: ಮಂಜುನಾಥ್
ಆಕಸ್ಮಿಕವಾಗಿ ಅಪಘಾತಗಳು ಸಂಭವಿಸುತ್ತದೆಯೇ ಹೊರತು ಉದ್ದೇಶಪೂರ್ವಕವಾಗಿ ನಡೆಯುವುದಿಲ್ಲ ವಿನಾಕಾರಣ ಸರ್ಕಾರ ಲಾರಿಚಾಲಕರನ್ನು ಹತ್ತಿಕ್ಕುವ ದುರುದ್ದೇಶದಿಂದ ಹಿಟ್ ಅಂಡ್ ರನ್ ಕಾನೂನನ್ನು ಜಾರಿಗೆ ತಂದಿದೆ ಎಂದು ಚಾಲಕ ಮಂಜುನಾಥ್ ರವರು ಅಭಿಪ್ರಾಯಪಟ್ಟರು.
(KOLARA): ಬಂಗಾರಪೇಟೆ: ಪಟ್ಟಣದ ಎಪಿಎಂಸಿ ಯಾರ್ಡ್ ಬಳಿಯಲ್ಲಿ ಲಾರಿ ಮಾಲೀಕರ ಸಂಘ ಹಾಗೂ ಜೈ ಭೀಮ್ ಲಾರಿ ಡ್ರೈವರ್ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೋಟರು ವಾಹನಗಳ ಆವಿಷ್ಕಾರದ ನಂತರ ಜಾರಿಗೆ ಬಂದ ಮೊದಲ ಸಂಚಾರ ಕಾನೂನುಗಳಲ್ಲಿ ಹಿಟ್-ಅಂಡ್-ರನ್ ಕಾನೂನುಗಳು ಪ್ರಮುಖವಾಗಿದ್ದು ಸಮಂಜಸವಲ್ಲ, ಲಾರಿ ಚಾಲಕರು ಬಹುತೇಕ ಬಡ ಕುಟುಂಬದಿoದ ಬಂದವರಾಗಿದ್ದು ಅನಕ್ಷರಸ್ಥರಾಗಿರುತ್ತಾರೆ, ಅಪಘಾತಗಳು ಆಕಸ್ಮಿಕವಾಗಿ ನಡೆಯುವುದರಿಂದ ಏಕಾಏಕಿ ಸರ್ಕಾರ 7 ಲಕ್ಷ ದಂಡ 1೦ ವರ್ಷ ಜೈಲು ಶಿಕ್ಷೆ ವಿಧಿಸಿದರೆ ಕುಟುಂಬ ಸದಸ್ಯರ ಸ್ಥಿತಿ ಅದೋಗತಿಗೆ ತಲುಪಬೇಕಾಗುತ್ತದೆ, ಈ ಕೂಡಲೇ ಸರ್ಕಾರ ತಮ್ಮ ನಿರ್ಧಾರವನ್ನು ಬದಲಿಸಿಕೊಂಡು ನೂತನ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು
ಏಕಮುಖ ನಿರ್ಧಾರ ಸೂಕ್ತವಲ್ಲ:
ಲಾಂಚಾಲಕರು ಸಂಚಾರಿ ನಿಯಮಕ್ಕೆ ಅನುಸಾರವಾಗಿ ವಾಹನ ಸಂಚರಿಸುತ್ತಿದ್ದರು ಸಹ ಕೆಲವೊಮ್ಮೆ ಇತರ ವಾಹನದ ಚಾಲಕರು ಓವರ್ ಟ್ರ್ಯಾಕ್ ಮತ್ತು ಅಡ್ಡಾ ದಿಡಿಯಾಗಿ ವಾಹನ ಸಂಚರಿಸುತ್ತಾರೆ ಇಂತಹ ಸಂದರ್ಭದಲ್ಲಿ ಅಪಘಾತಗಳು ಸಂಭವಿಸುವುದು ಸಹಜ ಪ್ರಕ್ರಿಯೆ ಆಗ ಬಾರಿ ವಾಹನಗಳ ಚಾಲಕರ ಮೇಲೆ ಪ್ರಕರಣಗಳನ್ನು ದಾಖಲಿಸಿ, ಏಕಮುಖ ನಿರ್ಧಾರ ಕೈಗೊಂಡು ಶಿಕ್ಷೆ ವಿಧಿಸುವುದು ಸಮಂಜಸವಲ್ಲ.
ಅಪಘಾತಗಳು ವಿವಿಧ ಕಾರಣಗಳಿಂದ ಸಂಭವಿಸುತ್ತವೆ ಮತ್ತು ಚಾಲಕರ ತಪ್ಪಿನಿಂದಲ್ಲ, ಅವರನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ಶಿಕ್ಷಿಸಲು ಸಾಧ್ಯವಿಲ್ಲ.ಅಪಘಾತಕ್ಕೀಡಾದವರಿಗೆ ಸಹಾಯ ಮಾಡಲು ಚಾಲಕರು ಯಾವಾಗಲೂ ಸಿದ್ಧರಿರುತ್ತಾರೆ. ಅಪಘಾತಗಳು ಸಂಭವಿಸಿದ ತಕ್ಷಣ ಸಾರ್ವಜನಿಕರಿಂದ ದಾಳಿ ಮಾಡಬಹುದಾದ ಕಾರಣ, ಅವರು ಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸಲಾಗುತ್ತದೆ. ಆದ್ದರಿಂದ, ತಿದ್ದುಪಡಿಯ ಅಡಿಯಲ್ಲಿ ಅಪಘಾತಗಳಿಗೆ ಚಾಲಕರನ್ನು ಶಿಕ್ಷಿಸಬಾರದು.
ಪ್ರತಿಭಟನೆ ದಿನವನ್ನು ವಿಸ್ತರಿಸುವ ಎಚ್ಚರಿಕೆ:
ಪ್ರಸ್ತುತ ನಮ್ಮ ಹೋರಾಟವು ಕೇಂದ್ರ ಸರ್ಕಾರದ ನೂತನ ಮೋಟಾರು ಕಾಯ್ದೆ ವಿರುದ್ಧ ಒಂದು ವಾರದ ಕಾಲ ನಡೆಯಲಿದ್ದು, ಸರ್ಕಾರ ನಿರ್ಲಕ್ಷಿಸಿದ್ದಲ್ಲಿ ಅನಿರ್ದಿಷ್ಟ ಅವಧಿ ಮುಷ್ಕರ ಕೈಗೊಳ್ಳುವುದರ ಮೂಲಕ ಹಾಲು ತರಕಾರಿ ಶಾಲಾ ವಾಹನ ಕಾರು ದ್ವಿಚಕ್ರ ವಾಹನಗಳನ್ನು ಸಹ ಸಂಚರಿಸದoತೆ ಉಗ್ರ ಹೋರಾಟ ಮಾಡಲಾಗುವುದು ಮುಂದೆ ನಡೆಯಬಹುದಾದ ಅವಗಡಗಳಿಗೆ ಸರ್ಕಾರವೇ ನೇರವಾಗಿರುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಈ ಸಂದರ್ಭದಲ್ಲಿ ಜಮೀರ್, ಮಂಜುನಾಥ್, ಸುರೇಶ್, ಮಹೇಶ್, ಜಾಕೀರ್, ಅಮೀರ್ಜಾನ, ಮುನ್ನ, ಎನ್.ಕರ್ಣ, ಪ್ಯಾರಿಜಾನ್ ಹಾಗೂ ಲಾರಿ ಚಾಲಕ ಸಂಘದ ಎಲ್ಲಾ ಪದಾಧಿಕಾರಿಗಳು, ಅಧ್ಯಕ್ಷರು, ಚಾಲಕರು, ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ