ಗೆದ್ದು ಬಾ ಭಾರತ, ಭಾರತ – ಆಸ್ಟ್ರೇಲಿಯಾ. ಇಂದು ಕ್ರಿಕೆಟ್ ಫೈನಲ್.
(CHIKKAMAGALURU) : ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕಟ್ ಪಂದ್ಯವು ಇಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು ದೇಶದಲ್ಲಿ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಹೆಚ್ಚಾಗಿದ್ದು ಗೆದ್ದು ಬಾ ಭಾರತ ಎಂಬಾ ಕೂಗು ಕೇಳಿ ಬರುತ್ತಿದೆ.
ಭಾರತ ಕ್ರಿಕೆಟ್ ತಂಡವು ಏಕದಿನ ವಿಶ್ವ ಕಪ್ ನಲ್ಲಿ ಜಯ ಸಾಧಿಸಲಿ ಎಂದು ‘ಮಲೆನಾಡಿನ ಒಳ್ಳೆಯ ಮನಸ್ಸಿನ ಒಕ್ಕೂಟ’, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಾಳೆಹೊನ್ನೂರು ಹಾಗೂ ಕ್ರಿಕೆಟ್ ಅಭಿಮಾನಿಗಳ ವತಿಯಿಂದ ಶನಿವಾರ ಸಿಗೋಡು ಕೆಫೆಯಲ್ಲಿ ‘ಗೆದ್ದು ಬಾ ಭಾರತ’ ಎಂಬ ಶೀರ್ಷಿಕೆ ಅಡಿ ಭಾರತ ಕ್ರಿಕೆಟ್ ತಂಡಕ್ಕೆ ಶುಭ ಕೋರುವ ವಿಶೇಷವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಜಯಪುರದ ಬಿಜಿಎಸ್ ಕಾಲೇಜ್ ಉಪನ್ಯಾಸಕರಾದ ಸೋಮೇಶ್ವರ, ಕಾರ್ಯಕ್ರಮದ ಸಂಯೋಜಕ ಚೈತನ್ಯ ವೆಂಕಿ, ಸಿಗೋಡು ಕೆಫೆಯಲ್ಲಿ ಮಾಲೀಕ ಅರ್ಜುನ್ ಕಾಡುಗ, ಡಿ ರಾಜೇಂದ್ರ, ಹಿರಿಯ ಕ್ರೀಡಾಪಟು ಓ.ಡಿ ಸ್ಟೀಫನ್, ಸತೀಶ್ ಅರಳಿಕೊಪ್ಪ, ಕೆ.ಎಂ ರಾಘವೇಂದ್ರ, ಕೆ ಪ್ರಶಾಂತ್ ಕುಮಾರ್, ಸೋಮೇಶ್ , ಅರ್ಜುನ್ ಕರ್ಡೋಜ, ಕ್ರಿಕೆಟ್ ಆಟಗಾರ ಇಸ್ಮೈಲ್ ನಾಗರಾಜ್ ಭಟ್ , ಸುರೇಂದ್ರ ಇತರರು ಭಾಗವಹಿಸಿದ್ದರು.