ಮಹಿಳೆಯರಿಗೆ ಕಾನೂನಿನ ಚೌಕಟ್ಟೆಯಲ್ಲಿ ಮಹಿಳೆಗೆ ಇರುವ ಸ್ಥಾನಗಳ ಕುರಿತು ಕಾರ್ಯಗಾರ.
(SHIVAMOGA ): ಸಾಗರ ತಾಲೂಕಿನ ತ್ಯಾಗರ್ತಿ ವಲಯ ವ್ಯಾಪ್ತಿಯ ಅಬಸೆ ಕಾರ್ಯ ಕ್ಷೇತ್ರದಲ್ಲಿ ಸಭೆಯನ್ನು ಹಮ್ಮಿಕೊಂಡಿದ್ದು ಕಾನೂನಿನ ಚೌಕಟ್ಟೆಯಲ್ಲಿ ಮಹಿಳೆಗೆ ಇರುವ ಸ್ಥಾನಗಳ ಕುರಿತು ವಕೀಲರಾದ ಶ್ರಾವ್ಯ ಇವರು ಸದಸ್ಯರಿಗೆ ಉತ್ತಮವಾದ ಮಾಹಿತಿಯನ್ನು ನೀಡಿದರು ಜೊತೆಗೆ ಫೋನ್ ಪೇ.ಗೂಗಲ್ ಪೇ.ಮತ್ತು ಆನ್ಲೈನ್ ನಲ್ಲಿ ಆಗುತ್ತಿರುವ ವಂಚನೆ ಕುರಿತು ಮಾಹಿತಿ ನೀಡುವುದರ ಜೊತೆ ಜೊತೆಗೆ ಸಾಲಕ್ಕಾಗಿ ಚೆಕ್ ನೀಡುತ್ತಿರುವ ಸದಸ್ಯರುಗಳಿಗೆ ಚೆಕ್ ನೀಡುವುದರಿಂದ ಆಗುತ್ತಿರುವ ಅನಾನುಕೂಲ ಮತ್ತು ಅದರಿಂದ ಅನುಭವಿಸುವಂತಹ ಕಷ್ಟಗಳ ಕುರಿತು ಸಂಕ್ಷಿಪ್ತವಾಗಿ ವಿವರಣೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಕಮಲಮ್ಮ ಇವರು ವಹಿಸಿಕೊಂಡಿದ್ದರು ಮತ್ತು ಆತ್ಮೀಯ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಸದರಿ ಸಭೆಯನ್ನು ತಾಲೂಕು ಸಮನ್ವಯ ಅಧಿಕಾರಿ ಗೌರಮ್ಮ ನಡೆಸಿಕೊಟ್ಟರು ಮತ್ತು ಬರುವ ಮುಂದಿನ ತಿಂಗಳಲ್ಲಿ ನಡೆಯುವ ಮಹಿಳಾ ಸಮಾವೇಶದ ಕುರಿತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಕುರಿತು ತಿಳಿಸಿದರು ಜ್ಞಾನವಿಕಾಸದ ಎಲ್ಲಾ ಕಾರ್ಯಕ್ರಮಗಳ ಅನುಕೂಲವನ್ನು ಪ್ರತಿಯೊಬ್ಬ ಸದಸ್ಯರು ಸಹ ತಪ್ಪದೆ ಪಡೆದುಕೊಳ್ಳಬೇಕು ಎಲ್ಲಾ ಮಹಿಳೆಯರು ಸಹ ಸ್ವಾವಲಂಬಿ ಜೀವನವನ್ನು ನಡೆಸಬೇಕು ಎನ್ನುವುದು ಮಾತೃಶ್ರೀ ಹೇಮಾವತಿ ಅಮ್ಮನವರ ಆಶಯವಾಗಿದ್ದು ಆಶಯವನ್ನು ನಾವೆಲ್ಲರೂ ಸಹ ಅನುಸರಿಸಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಸಂಘದ ಸರ್ವ ಸದಸ್ಯರು ವಲಯದ ಮೇಲ್ವಿಚಾರಕರು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ