ಪಟ್ಟಣದ ತಾಲೂಕು ಕಚೇರಿ ಮುಂದೆ ರೈತ ಸಂಘದಿಂದ ವಿಶ್ವ ರೈತ ದಿನಾಚರಣೆ
(KOLARA): ಬಂಗಾರಪೇಟೆ:ವಿಶ್ವ ರೈತ ದಿನಾಚರಣೆ ಹಾಗೂ ಕೆ.ಎಸ್.ಪುಟ್ಟಣ್ಣಯ್ಯ ರವರ ಜನ್ಮ ದಿನಾಚರಣೆಯನ್ನು ರೈತ ಸಂಘದಿoದ ತಾಲ್ಲೂಕು ಕಛೇರಿ ಮುಂದೆ ಪ್ರಗತಿ ರೈತರಿಗೆ ಸನ್ಮಾನ ಬಡವರಿಗೆ ತರಕಾರಿ ಹಂಚುವ ಮುಖಾಂತರ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ರವರು ಭಾಗವಹಿಸಿ ಮಾತನಾಡಿದ ರವರು ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ತಾಲ್ಲೂಕಿನ ರೈತರಿಗೆ ಯಾವುದೇ ಸಮಸ್ಯೆಯಾದರೂ ನೇರವಾಗಿ ನಮ್ಮನ್ನು ಸಂಪರ್ಕ ಮಾಡಿ ಜೊತೆಗೆ ಕಂದಾಯ ಹಾಗೂ ಅರಣ್ಯ ಇಲಾಖೆಯ ಜಮೀನುಗಳಿಗೆ ಸಂಬoಧಿಸಿದ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವ ಭರವಸೆಯನ್ನು ಕಾರ್ಯಕ್ರಮದಲ್ಲಿ ನೀಡಿದರು.
ಕೇಂದ್ರ ಸರ್ಕಾರ ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಲು ಮೀನಾಮೇಷ ಎಣಿಸುತ್ತಿದೆ. ಮಾನ್ಯ ಮುಖ್ಯ ಮಂತ್ರಿಗಳು ಸಂಕ್ರಾoತಿ ಹಬ್ಬಕ್ಕೆ ರೈತರ ಖಾತೆಗಳಿಗೆ 2000 ರೂಪಾಯಿ ಪರಿಹಾರ ವಿತರಣೆ ಮಾಡುವುದಾಗಿ ಹೇಳಿದರು.
ಕೃಷಿ ಜಮೀನನ್ನು ಕೈಗಾರಿಕೆ ರಸ್ತೆ, ಲೇಔಟ್ ಹೆಸರಿನಲ್ಲಿ ಬಲವಂತ ಸ್ವಾಧೀನ ಮಾಡಿಕೊಂಡು ರೈತರನ್ನು ಒಕ್ಕಲೆಬ್ಬಿಸಿದರೆ ಆಹಾರಕ್ಕಾಗಿ ಮುಂದಿನ ದಿನಗಳಲ್ಲಿ ಮೂರನೇ ಮಹಾ ಯುದ್ದ ಶುರುವಾಗುವ ಕಾಲ ದೂರವಿಲ್ಲವೆಂದು ಕಾರ್ಯಕ್ರಮದಲ್ಲಿ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಸರ್ಕಾರದ ರೈತ ವಿರೋಧಿ ದೋರಣೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕೂಡಲೇ ಕೃಷಿ ಬೆಲೆ ನೀತಿ ಜಾರಿ ಮಾಡಬೇಕೆಂದು ಕಾರ್ಯಕ್ರಮದಲ್ಲಿ ಒತ್ತಾಯ ಮಾಡುವ ಜೊತೆಗೆ ಶಿಕ್ಷಣ ಆರೋಗ್ಯ ಉದ್ಯೋಗವನ್ನು ಹೊರತುಪಡಿಸಿ ಎಲ್ಲಾ ಉಚಿತ ಗ್ಯಾರೆಂಟಿಗಳನ್ನು ರದ್ದು ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
ರಾಜ್ಯದ ರೈತರು ಕಳೆ ಮೂರು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಅತಿವೃಷ್ಟಿ ಈ ವರ್ಷ ಬೀಕರವಾದ ಬರಗಾಲ ಆವರಸಿರುವುದರಿಂದ ಬೆಳೆ ಹಾಗೂ ಬರದಿಂದ ತತ್ತರಿಸಿರುವ ರೈತರ ಸಾಲವನ್ನು ಸಂಪೂರ್ಣವಾಗಿ ಯಾವುಷೇ ಷರತ್ತು ಬದ್ದವಿಲ್ಲದೆ ಉದ್ಯಮೆಗಳ 12 ಲಕ್ಷ ಸಾಲ ಮನ್ನ ಮಾಡಿದಂತೆ ರೈತರ ಕೃಷಿ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ರೈತರ ಮೈಮೇಲಿನ ಕೆಸರು ಮಣ್ಣು ಆರುವ ಮೊದಲು ಅವರ ಬೆವರ ಹನಿಗೆ ತಕ್ಕ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ ಅಭಿವೃದ್ದಿ ಪಡಿಸದೇ ಇದ್ದರೆ, ಮುಂದಿನ ದಿನಗಳಲ್ಲಿ ದೇಶದ ಅಪೌಷ್ಠಿಕತೆಗೆ ಸರ್ಕಾರಗಳ ರೈತ ವಿರೋಧಿ ದೋರಣೆಯೇ ಕಾರಣವಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.
ಕೃಷಿ ವೆಚ್ಚ ಅಧಿಕವಾಗಿದೆ. ಇಳುವರಿ ಕಡಿಮೆಯಾಗುತ್ತಿದೆ. ಜನ ಸಂಖ್ಯೆ: ಅಧಿಕವಾಗುತ್ತಿದೆ. ಹಿಗಿದ್ದರೂ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಕೃಷಿ ಕ್ಷೇತ್ರವನ್ನು ನಿರ್ಲಕ್ಷೆ ಮಾಡುತ್ತಿದ್ದರೆ, ಹೊರ ದೇಶಗಳು ಆಹಾರವನ್ನು ಕಲಬೆರಿಕೆ ಮಾಡಿ ದೇಶದ ಕೋಟ್ಯಾಂತರ ರೈತ ಕೂಲಿ ಕಾರ್ಮಿಕರ ಆರೋಗ್ಯವನ್ನು ಹದಗೆಡಿಸಿ ಆಸ್ಪತ್ರೆ ಮಾತ್ರೆ, ವ್ಯಾಪಾರ, ವಸ್ತುವಾಗಿ ದೇಶದ ಜನರ ಬದಲಾವಣೆ ಕಾಲ ದೂರವಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಕೃಷಿ ವೆಚ್ಚ ಅಧಿಕವಾಗಿ ಲಾಭ ಕಡಿಮೆಯಾಗುತ್ತಿರುವುದರಿಂದ ರೈತರ ಮಕ್ಕಳು ಕೃಷಿಯಿಂದ ವಿಮುಕ್ತರಾಗುತ್ತಿದ್ದಾರೆ. ಕೃಷಿಯಿಂದ ವಿಮುಕ್ತರಾಗುವುದು ಈ ದೇಶದ ಮೇಲಿನ ಅವಲಂಬನೆ ಅಧಿಕಗೊಳ್ಳುತ್ತದೆ. ಹೀಗಾಗಿ ಕೂಡಲೇ ಪರಿಣಾಮಕಾರಿ ನೀತಿ ಜಾರಿಗೆ ತಂದು ಕೃಷಿ ಪದ್ದತಿಯನ್ನು ಉಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ತಾ.ಅಧ್ಯಕ್ಷ ಅಪ್ಪೋಜಿರಾವ್, ಮುನಿಕೃಷ್ಣ, ಗೋವಿಂದಪ್ಪ, ಮುನಿಯಪ್ಪ, ಸುರೇಶ್ಬಾಬು, ರಾಮಸಾಗರ ವೇಣು, ಮಂಜುನಾಥ, ರತ್ನಮ್ಮ, ಶೈಲಜ, ಭಾಗ್ಯಮ್ಮ, ವೆಂಕಟಮ್ಮ, ಮುನಿಯಮ್ಮ, ಅಕ್ಕಮ್ಮ, ಸರೋಜಮ್ಮ, ರಾಮಕ್ಕ, ಸರಸಮ್ಮ, ಮಂಗಸoದ್ರ ತಿಮ್ಮಣ್ಣ, ಸುಪ್ರಿಂ ಚಲ, ತೋಟಗಾರಿಕೆ ಕೃಷಿ, ರೇಷ್ಮೆ ಕೆ.ಇ.ಬಿ ಅಧಿಕಾರಿಗಳು, ಭಾಗವಹಿಸಿದರು.
ವರದಿ: ವಿಷ್ಣು ಕೋಲಾರ