ಲೋಕಾರ್ಪಣೆಗೆ ಸಿದ್ಧವಾದ ಯರಗೋಳ್, ಮುಖ್ಯಮಂತ್ರಿಗಳಿಂದ ಉದ್ಘಾಟನೆ.
(KOLAR): ಬಂಗಾರಪೇಟೆ: ಬರಪೀಡಿತ ಪ್ರದೇಶವಾದ ಕೋಲಾರ ಜಿಲ್ಲೆಯಲ್ಲಿ ರೈತರ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಮಹತ್ವಕಾಂಕ್ಷಿ ಯೋಜನೆಯಾದ ಯರಗೋಳ್ ಜಲಾಶಯವನ್ನು ನಿರ್ಮಿಸಲಾಗಿದ್ದು, ನ.11ರಂದು ಲೋಕಾರ್ಪಣೆಗೆ ಸಿದ್ದವಾಗಿದೆ ಈ ಕಾರ್ಯಕ್ರಮವನ್ನು ಉದ್ಘಾಟಿಸಲು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಯರಗೋಳ್ ಡ್ಯಾಂ ಉದ್ಘಾಟನೆಯ ಪೂರ್ವಭಾವಿಯಾಗಿ ಕಾರ್ಯಕ್ರಮ ಏರ್ಪಡಿಸುವ ಸ್ಥಳ ವೀಕ್ಷಣೆಗೆ ಆಗಮಿಸಿ ಮಾದ್ಯಮ ಹೇಳಿಕೆ ನೀಡಿದ ಅವರು, ಯರಗೋಳ ಪ್ರದೇಶವು ತಮಿಳುನಾಡಿನ ಗಡಿ ಪ್ರದೇಶವಾಗಿದ್ದು ಕರ್ನಾಟಕದಿಂದ ಯಥೇಚ್ಛವಾಗಿ ನೀರು ಹರಿದು ಹೋಗುತ್ತು, ಇದನ್ನು ತಡೆಗಟ್ಟಿ ಮಾಲೂರು ಕೋಲಾರ ಬಂಗಾರಪೇಟೆ ತಾಲೂಕುಗಳ 45 ಹಳ್ಳಿಗಳಿಗೆ ನೀರನ್ನು ಒದಗಿಸುವುದರ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬ ಮಹತ್ವಕಾಂಕ್ಷೆಯ ಗುರಿಯೊಂದಿಗೆ ಜಲಾಶಯ ನಿರ್ಮಾಣವಾಗಿದೆ, ಕೋಲಾರ ಜಿಲ್ಲೆ ಜನರು ಕುಡಿಯುವ ನೀರಿಗಾಗಿ ಅಹಾಕಾರದಿಂದ ಬಳಲುತ್ತಾ, ಪರಿತಪಿಸುತ್ತಿದ್ದರು. ರೈತರು ಮಳೆ ಬೆಳೆಯಿಲ್ಲದೆ, ಆರ್ಥಿಕವಾಗಿ ಸಂಕಷ್ಟದಲ್ಲಿ ಮುಳುಗಿ ತತ್ತರಿಸಿ ಹೋಗಿದ್ದರು. ಇವರ ಭವಣೆಗೆ ಸ್ಪಂಧಿಸಿದ ಮಾನ್ಯ ಮುಖ್ಯಮಂತ್ರಿಗಳು ಯರಗೋಳ್ ಜಲಾಶಯವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಕಾರ್ಯಕ್ರದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹಮಂತ್ರಿ ಪರಮೇಶ್ವರ್, ಸತೀಶ್ ಜಾರಕಿಹೊಳಿ, ಮಹದೇವಪ್ಪ, ಕೃಷ್ಣ ಬೈರೇಗೌಡ, ಹಾಗೂ ಈ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರನ್ನು ಒಳಗೊಂಡತೆ ಜಿಲ್ಲಾಧ್ಯಂತ ಸಾರ್ವಜನಿಕರು ಯಥೇಚ್ಚವಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.
ಐತಿಹಾಸಿಕ ಮೈಲುಗಲ್ಲಿಗೆ ಸಾಕ್ಷಿ:
ಮಾಲೂರು ತಾಲ್ಲೂಕಿನ ಶಾಸಕ ನಂಜೇಗೌಡ ಮಾತನಾಡಿ ಎಸ್ ಎನ್ ನಾರಾಯಣಸ್ವಾಮಿಯವರ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಎರಗೋಲ್ ಜಲಾಶಯವನ್ನು ನವೆಂಬರ್ 11ರಂದು ಉದ್ಘಾಟನೆ ಮಾಡುವುದರ ಮೂಲಕ ಹೊಸ ಇತಿಹಾಸಿಕ ಮೈಲುಗಲ್ಲಿಗೆ ವೇದಿಕೆಯಾಗಲಿದೆ, ಮೈಸೂರು ಮಹಾರಾಜರು ಬೂದಿಕೋಟೆ ಭಾಗದಲ್ಲಿ ಮಾರ್ಕಂಡಯ್ಯ ಡ್ಯಾಂ ಅನ್ನು ನಿರ್ಮಿಸುವುದರ ಮೂಲಕ ಬಂಗಾರಪೇಟೆ ತಾಲೂಕಿನ ಜನರ ನೀರಿನ ಭವಣೆಯನ್ನು ನೀಗಿಸಿದರು, ತದನಂತರದ ದಿನಗಳಲ್ಲಿ ಮಳೆ ಇಲ್ಲದೆ ಕೋಲಾರ ಜಿಲ್ಲೆಯ ಜನರು ಮತ್ತು ರೈತರು ಬರಗಾಲದಿಂದ ಕತ್ತರಿಸಿ ಹೋಗಿದ್ದರು, ಹಾಗೂ ಮಾಲೂರು ತಾಲೂಕಿನ ಜನರು ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು ಆದರೆ ಇಂದು ಯರಗೋಳ್ ಜಲಾಶಯ ಲೋಕಾರ್ಪಣೆಯಾಗುವುದರ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲಾಗುವುದು,
ಕಾರ್ಯಕ್ರಮದ ರೂಪುರೇಷೆ:
ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು 11:00ಗೆ ಹೆಲಿಕಾಪ್ಟರ್ ಮೂಲಕ ಜಲಾಶಯದ ಬಳಿ ಆಗಮಿಸಲಿದ್ದು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಗುವುದು ಸರಿಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆಯಿದ್ದು ಹಾಸನಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಇದರೊಟ್ಟಿಗೆ ಕುಡಿಯುವ ನೀರು ಲಘು ಆಹಾರ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಮುಖ್ಯಮಂತ್ರಿಗಳನ್ನು ಯರಗೋಳ ಜಲಾಶಯದ ಮುಖ್ಯದ್ವಾರದಿಂದ ಉದ್ಘಾಟನೆಯಾಗುವ ಸ್ಥಳದವರಿಗೆ ಕಲಶೋತ್ತ ಮಹಿಳೆಯರು ಡೊಳ್ಳು ಕುಣಿತ ವಾದ್ಯಗೋಷ್ಠಿಗಳೊಂದಿಗೆ ಸ್ವಾಗತ ಕೋರಲಾಗುವುದು ಎಂದು ತಿಳಿಸಿದರು ಸ್ವಾಗತ ಕೋರಲಾಗುವುದು ಎಂದರು.
ಈ ಸಂದರ್ಭದಲ್ಲಿ ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವಪ್ಪ, ಮುಖಂಡರಾದ ವಿ ಎಸ್ ಎಸ್ ಎನ್ ಅಧ್ಯಕ್ಷ ವೆಂಕಟೇಶ್ ಗೌಡ, ಬೂದಿಕೋಟೆ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷ ಸರಸ್ವತಿ ರಾಮಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ರಾಮಪ್ಪ , ಗ್ರಾಮ ಪಂಚಾಯಿತಿ ಅಧ್ಯಕ್ಷ ಆದಿನಾರಾಯಣ ಕುಟ್ಟಿ, ಎ.ಇ.ಇ ಶೇಷಾದ್ರಿ, ಪಿಡಬ್ಲ್ಯೂಡಿ ಅಭಿಯಂತರ ರವಿ,ರವಿ ಇ. ಓ. ರವಿಕುಮಾರ್, ಬಿ ಇ ಓ ಸುಕನ್ಯಾ, ಪಿಡಿಒ ಮಧು, ಕಾರ್ಯದರ್ಶಿ ಶಿವು, ಕೇದಾರನಾಥ್, ವಿ ಎಸ್ ಎಸ್ ಮಾಜಿ ಅಧ್ಯಕ್ಷ ವಿಜಯಕುಮಾರ್. ಇತರರು ಉಪಸ್ಥಿತರಿದ್ದರು.
ವರದಿ ವಿಷ್ಣು ಕೋಲಾರ