ಮನರಂಜನೆ

ಹೌದು ನಾನೊಬ್ಬ ಕಪ್ಪು ವರ್ಣಿಯ………

ಹೌದು ನಾನೊಬ್ಬ ಕಪ್ಪು ವರ್ಣಿಯ………

ಮನುಷ್ಯನ ರಕ್ತಗತವಾಗಿ ಬಂದಿರುವ ಬಳುವಳಿಯೆಂದರೆ ಅದು ಒಬ್ಬರನ್ನು ಟೀಕಿಸುವ ಗುಣ ಟೀಕೆಗೆ ಯಾವುದೇ ಕಾರಣಗಳಿಲ್ಲದಿದ್ದರೂ ತನ್ನ ಮನಸ್ಸಿನ ತೀಟೆಯನ್ನು ತೀರಿಸಿಕೊಳ್ಳುವುದಕ್ಕಾದರೂ ತನ್ನ ಎದುರಿನಲ್ಲಿರುವವನ ನ್ಯೂನ್ಯತೆಯನ್ನು ಹುಡುಕುವ ಕೆಲಸ ಮಾಡುತ್ತಾನೆ ದುರಂತವೆಂದರೆ ” ಮನೋನ್ಯೂನ್ಯತೆ “ವಿರುವುದು ತನ್ನಲ್ಲಿಯೇ ಎಂಬುದನ್ನು ಅರಿಯಲು ವಿಫಲನಾದವನು ಎದುರಿನವನ ಜಾತಿ ಬಣ್ಣ ದೇಹದ ಆಕಾರವನ್ನಿಟ್ಟುಕೊಂಡು ಟೀಕಿಸಲು ಮುಂದಾಗುತ್ತಾನೆ. ಒಬ್ಬರನ್ನು ಅಣಕಿಸುವದರಿಂದ ಏನೂ ಸಿಗುವುದಿಲ್ಲವೆಂದು ಗೊತ್ತಿದ್ದರೂ ಅಣಕಿಸುತ್ತಾನೆ ಇತರರನ್ನು ಹೀಯಾಳಿಸುತ್ತಾ ” ಅಸುರ ಸಂತೋಷಕ್ಕೆ ” ಒಳಾಗಾಗುತ್ತಾನೆ.
ಕಪ್ಪಗಿರುವುದು ಕಳಂಕನ? ಕಪ್ಪಗಿರುವುದು ಕುರೂಪವ? ಕಪ್ಪಗಿರುವುದು ನತದೃಷ್ಟತನವ? ಕಪ್ಪಗಿರುವುದು ಪ್ರತಿಭಾ ಹೀನತೆಯ ಲಕ್ಷಣವ? ಕಪ್ಪಗಿರುವುದು ದುಷ್ಟತನದ ಪ್ರತಿರೂಪವ? ಈ ರೀತಿಯ ನಾನಾ ಪ್ರಶ್ನೆಗಳು ನನ್ನ ಮನದಲ್ಲಿ ಹುಟ್ಟುವುದಕ್ಕೆ ಕಾರಣ ಈ ಸಮಾಜದ ಕೆಲ ವ್ಯಕ್ತಿಗಳು ಬಣ್ಣವನ್ನು ಅಸ್ತ್ರವಾಗಿಸಿಕೊಂಡು ಅಣಕಿಸುವುದು ವಿಚಿತ್ರವಾಗಿ ನೋಡುವುದು ನನಗೆ ಒಮ್ಮೊಮ್ಮೆ ಅನಿಸುವುದು ಕಪ್ಪಗಿರುವವರು ಅನ್ಯಗ್ರಹದ ಜೀವಿಗಳ? ಅಥವಾ ಕಪ್ಪು ಬಣ್ಣದ ವ್ಯಕ್ತಿಗಳನ್ನು ಟೀಕಿಸುವ ವ್ಯಕ್ತಿಗಳು ಅನ್ಯಗ್ರಹದ ಜೀವಿಗಳ? ಉತ್ತರ ನನ್ನಲ್ಲಿಯೇ ಇತ್ತು ಇಬ್ಬರು ಈ ಗ್ರಹದ ಮನುಷ್ಯ ಜೀವಿಗಳು ಆದರೆ ಟೀಕಿಸುವ ಮನಸ್ಥಿತಿಗಳ ಮನಸ್ಸು ಈ ಗ್ರಹದ ಜೀವಿಗಳು ಅಲ್ಲವೆಂದು ” ಕಲ್ಪೋ ಸೌಂದರ್ಯದ ” ಕಡೆ ಹೆಜ್ಜೆ ಹಾಕುತ್ತಿದೆ ಅರ್ಥಾತ್ ಅಪಾಯದ ಕೂಪದಲ್ಲಿ ಬೀಳಲು ಮುಂದಾಗುತ್ತಿದೆ ಎಂಬುದು.
ಇದೊಂದು ಮನೋರೋಗವೆಂದು ಹೇಳಬಹುದು. ಕೇವಲ ಮೈಬಣ್ಣ ವ್ಯಕ್ತಿಯ ಸ್ಥಿತಿಯನ್ನು ಅಳೆಯುತ್ತಾ? ವ್ಯಕ್ತಿಯ ಪ್ರತಿಭೆಯನ್ನು ಆಳೆಯುತ್ತಾ? ವ್ಯಕ್ತಿಯ ವ್ಯಕ್ತಿತ್ವದ ನಿರ್ಧಾರಿತ ಕೇಂದ್ರವಾ? ಟೀಕಿಸುವವರಿಗೆ ಟೀಕೆಗೆ ಗುರಿಯಾಗುವವರಿಗೆ ಗೊತ್ತಿದೆ ಮೈ ಬಣ್ಣ ಇವುಗಳನ್ನು ನಿರ್ಧರಿಸುವುದಿಲ್ಲವೆಂದು ಮನೋರೋಗಕ್ಕೆ ತುತ್ತಾದವರು ಮಾತ್ರ ಅಂಧ ನಂಬಿಕೆಗೆ ಒಳಗಾಗಿ ಮೈ ಬಣ್ಣ ಎಲ್ಲದರ ನಿರ್ಧಾರಕವೆಂಬುದನ್ನು ನಂಬಿದ್ದಾರೆ.

ಬೇರೆ ದೇಶಕ್ಕೆ ಹೋಲಿಕೆ ಮಾಡಿಕೊಂಡರೆ ಭಾರತದಲ್ಲಿ ವರ್ಣ ತಾರತಮ್ಯ ಉತ್ತುಂಗದ ಮುಟ್ಟಿ ರುದ್ರತಾಂಡವನ್ನಾಡುತಿದೆ. ನೆನಪಿರಲಿ ಭಾರತದಲ್ಲಿ ಅತೀ ಹೆಚ್ಚು ಸೌಂದರ್ಯ ವರ್ಧಕ ನಕಲಿ ಕ್ರೀಮ್ ಗಳು ಮಾರಾಟವಾಗುತ್ತಿದೆ. ನಮಗೆ ಕಣ್ಣಿಗೆ ಕಾಣುವಂತೆ ಅನೇಕ ಮಾಧ್ಯಮಗಳು “ಆಡಿಷನ್ ನಡೆಸುವ ನೋಡಲು ಅಂದ ಚೆಂದವಿರುವವರು ಆಡಿಷನ್ ನಲ್ಲಿ ಭಾಗವಹಿಸಿ ಬಹುದೆಂದು ಹಾಕಿದ್ದರು” ಕೂಡ ನಾವದನ್ನು ಪ್ರಶ್ನಿಸದೆ ಒಪ್ಪಿಕೊಂಡು ಬಂದಿದ್ದೇವೆ ಕಪ್ಪು ವರ್ಣಿಯರು ತೆರೆಯ ಹಿಂದಿರಬೇಕು ಹಾಸ್ಯ, ಪಾತ್ರಧಾರಿಗಳಾಗ ಬೇಕು, ವಾಯ್ಸ್ ಓವರ್ ಆರ್ಟಿಸ್ಟ್ ಗಳಾಗಬೇಕು ತೆರೆಯ ಮುನ್ನೆಲೆಗೆ ಬಂದರೆ TRP ಕಡಿಮೆ ಆಗುತ್ತದೆ ಎಂಬುವ ವಿಚಿತ್ರ ನಂಬಿಕೆ ಒಂದು ವೇಳೆ ತೆರೆಯ ಮುನ್ನೆಲೆಗೆ ಬಂದರು ಅವರನ್ನು ಹೆಚ್ಚು ದಿನ ಉಳಿಸಿಕೊಳ್ಳುವುದಿಲ್ಲ ಹಾಗೆ ಲೆಕ್ಕಾಚಾರ ಮಾಡಿ ಉತ್ತರ ಭಾರತದಲ್ಲಿ ಕಪ್ಪು ವರ್ಣಿಯರು ಎಷ್ಟು ಜನ ತಾರೆಯರು ಆಗಿದ್ದಾರೆ? ಸುದ್ದಿ ನಿರೂಪಕರಾಗಿದ್ದಾರೆ? ಇದಕ್ಕೆ ಹೊರತಾಗಿ ನಮ್ಮ ರಾಜ್ಯವಿಲ್ಲ ನಮ್ಮಲ್ಲಿಯೂ ಇದೇ ಸ್ಥಿತಿ. ಕಪ್ಪಗಿರುವವರಿಗೆ ಅವಕಾಶದಿಂದ ದೂರ ತಳ್ಳಲಾಗಿದೆ.
ನನ್ನ ಮೈಬಣ್ಣ ಕಪ್ಪು ಎಂಬುದರ ಬಗ್ಗೆ ಹೆಮ್ಮೆಯಿದೆ ನಾನು ಹುಟ್ಟುವಾಗ ಬಳುವಳಿಯಾಗಿ ಬಂದ ಬಣ್ಣದ ಬಗ್ಗೆ ನಾನ್ಯಾಕೆ ಕೀಳರಿಮೆ ಪಡಲಿ ನನ್ನ ಟೀಕಿಸುವಾಗ ನನಗೆ ನನ್ನ ಟೀಕಿಗಳ ಮೇಲೆ ಯಾವ ಸಿಟ್ಟು ಬರುವುದಿಲ್ಲ ಬದಲಾಗಿ ಕರುಣೆ ಬರುತ್ತದೆ ಮನೋಭ್ರಾಂತಿಗೆ ಒಳಗಾದವನ ಮೇಲೆ ಕರುಣೆ ಹುಟ್ಟದೇ ಮತ್ತೇನು ಹುಟ್ಟಿತು.
ಈ ದೇಶದಲ್ಲಿ ಬಣ್ಣ ನಿಂದನೆಗೆ ಪ್ರಕರಣ ದಾಖಲಿಸುವ ಅವಕಾಶವಿದ್ದರೂ ಪ್ರಕರಣ ದಾಖಲಿಸುವ ಮನಸ್ಸು ಯಾರು ಮಾಡುತ್ತಿಲ್ಲ ಹಾಗೆ ಮಾಡಿದ್ದರೆ ಇಷ್ಟೊತ್ತಿಗೆ ದೇಶದ 45% ಜನರ ಮೇಲೆ ಪ್ರಕರಣ ದಾಖಲಾಗುತಿತ್ತು ಮುಂದೆ ಇಂಥ ಅವಕಾಶಕ್ಕೆಡೆ ಮಾಡಿಕೊಡದಾಗೆ ನಡೆದುಕೊಳ್ಳುವ ಜರೂರು ಬಣ್ಣ ನಿಂದಕರ ಮೇಲಿದೆ.
“ಬಣ್ಣ ಬುದ್ಧಿಮಾಂದ್ಯತೆಯನ್ನು ಸೃಷ್ಟಿಸಬಾರದು ಆ ರೀತಿ ಸೃಷ್ಟಿಸಿದರೆ ಸಮಾಜವು ಅಳಿವನ್ನು ಸಂದಿಸುತ್ತದೆ”

ನೀಲಕಂಠ ಬಾಳೆಹೊನ್ನೂರು

Leave a Reply

Your email address will not be published. Required fields are marked *

Scan the code