ಹೆಣ್ಣಿಗಾಗಿ ದೇವರ ಮೊರೆ ಹೋದ ಯುವಕರು. ಸಿಗದೇ ಇದ್ದಲ್ಲಿ ಮಠಕ್ಕೆ ಅರ್ಜಿ ಹಾಕಿದ 30 ಯುವಕರು.
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಖಂಡ್ಯ ಹೋಬಳಿ ಬಿದರೆ ಅಂಚೆ ಬ್ಯಾಡಿಗೆರೆ ಗ್ರಾಮದಲಿ ನಡೆದ ಒಂದು ವಿಶೇಷ ಘಟನೆ. ಹೌದು ಇದು ಅಚ್ಚರಿಯಾದರೂ ಸತ್ಯ ಸಂಗತಿ.
ಇತ್ತೀಚಿಗೆ ಇದೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ 3 ದಿನಗಳ ಕಾಲ ಸುಗ್ಗಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. 4 ನೇ ದಿನ ಗ್ರಾಮದ ಹಿರಿಯರು ಮುಖ್ಯಸ್ಥರು ಹಾಗೂ ಪರದೇಶಪ್ಪ ಮಠದ ಗುರುಗಳಾದ ಮಧುಕುಮಾರ್ ಶಾಸ್ತ್ರಿ ಸೇರಿ ಅನೇಕ ಯುವಕರು ಹಾಗೂ ಗ್ರಾಮದ ಎಲ್ಲಾ ನಿವಾಸಿಗಳು ಸೇರಿ 101 ಕೋಟಿ ಗಣಗಳ ಹೊಂದಿರುವ ಹಾಗೂ ಕಳಸ ಇರುವ ಗಿರಿ ಹತ್ತಿ ಮಳೆಗಾಗಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಗಿರಿಯಿಂದ ಕೆಳಗೆ ಇಳಿಯುವಾಗ ಗುಡುಗಿನ ಸದ್ದು ಕೇಳಿಬಂದಿದ್ದು, ಮಳೆಯ ಮನ್ಸೂಚನೆ ನೀಡಿದೆ.
ಗ್ರಾಮಸ್ಥರಿಗೆ ಅಚ್ಚರಿ ಹಾಗೂ ಸಂತಸ ತಂದಿತ್ತು. ಇದೆ ಸಂದರ್ಭದಲ್ಲಿ ಗ್ರಾಮದ ಅನೇಕ 25 ರಿಂದ 38 ವರ್ಷದ ಯುವಕರಿಗೆ ಇನ್ನು ಮದುವೆ ಆಗದ್ದನ್ನು ಕಂಡ ಊರಿನ ಮುಖ್ಯಸ್ಥರು ಹಾಗೂ ಪರದೇಶಪ್ಪ ಮಠದ ಗುರುಗಳಾದ ಮದುಕುಮಾರ್ ಶಾಸ್ತ್ರಿ ಅವರು ಯುವಕರೆಲ್ಲರನ್ನು ಸೇರಿಸಿ ಮದುವೆಯಾಗದ ಯುವಕರ ಪಟ್ಟಿಮಾಡಿ ಶ್ರೀ ಸಿದ್ದೇಶ್ವರ ಸ್ವಾಮಿ ಹಾಗೂ ಶ್ರೀ ಅಜ್ಜಯ್ಯ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನ್ನವರಿಗೆ ಗ್ರಾಮದ ಎಲ್ಲ ಯುವಕರಿಗೆ ಆದಷ್ಟು ಬೇಗ ಹುಡುಗಿ ಸಿಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಯುವಕರ ಪಟ್ಟಿಯನ್ನು ಕಾಣಿಕೆ ಹುಂಡಿಗೆ ಹಾಕಿ ಇನ್ನೊಂದು ಪಟ್ಟಿಯನ್ನು ಪರದೇಶಪ್ಪನ ಮಠಕ್ಕೆ ಕಳುಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಯುವಕರು ಹಾಸ್ಯ ಚಟಾಕಿ ಹಾರಿಸಿ ಹುಡುಗಿ ಸಿಗದೇ ಇದ್ದ ಸಂದರ್ಭದಲ್ಲಿ ಮಠಕ್ಕೆ ಸೇರಿಕೊಳ್ಳುವುದಾಗಿ ಪರದೇಶಪ್ಪ ಮಠದ ಗುರುಗಳಾದ ಮಧು ಕುಮಾರ್ ಶಾಸ್ತ್ರಿಯವರಿಗೆ ತಿಳಿಸಿದ್ದಾರೆ.