ಸೇವೆ ಎಂಬ ಭಕ್ತಿಯಂತೆ ಸೇವಾ ಭಾವ ಹೊಂದಿ ದೇಶ ಪ್ರೇಮದಿಂದ ದೇಶ ಕಾಯಲು ಹೊರಟ ಯುವಕರು.
(KOLARA): ಬಂಗಾರಪೇಟೆ :ದೇಶ ಸೇವೆ ಮಾಡುವುದು ಪುಣ್ಯದ ಕೆಲಸ, ನಮ್ಮ ಕಾಲೇಜಿನಿಂದ ಸಾಕಷ್ಟು ಯುವಕರು ದೇಶ ಸೇವೆ ಮಾಡಲು ಸೇವೆ ಎಂಬ ಭಕ್ತಿಯಂತೆ ಸೇವಾ ಭಾವ ಹೊಂದಿ ದೇಶ ಪ್ರೇಮದಿಂದ ದೇಶ ಕಾಯಲು ಹೊರಟಿರುವುದು ಸಂತಸ ತಂದಿದೆ ಎಂದು ಹಿರಿಯ ಪ್ರೊಫೆಸರ್ ಶ್ರೀಕಾಂತ್ ರವರು ತಿಳಿಸಿದರು.
ಪಟ್ಟಣದ ಪ್ರಥಮ ದರ್ಜೆಯ ಕೆ.ಸಿ ರೆಡ್ಡಿ ಕಾಲೇಜಿನ ವಿದ್ಯಾರ್ಥಿಗಳು ಭಾರತೀಯ ಸೇನೆಗೆ 5 ಜನ ವಿದ್ಯಾರ್ಥಿಗಳು ಅಗ್ನಿ ವೀರರಾಗಿ ಆಯ್ಕೆಯಾಗಿರುವ ಪ್ರಯುಕ್ತ ಎನ್ ಸಿ ಸಿ ಘಟಕ ಹಾಗೂ ಎಂಸಿಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿ,ಜೈ ಜವಾನ ಜೈ ಕಿಸಾನ ರೈತ ಹಾಗೂ ಸೈನಿಕ ದೇಶದ ದೊಡ್ಡ ಶಕ್ತಿ ರೈತ ದೇಶಕ್ಕೆ ಅನ್ನ ನೀಡುವ ಧನಿಯಾದರೆ ಸೈನಿಕ ದೇಶದ ಗಡಿಯಲ್ಲಿ ಮಳೆ ಚಳಿ ಎನ್ನದೆ ನಮ್ಮನ್ನು ಕಾಪಾಡುವ ಕೆಲಸ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳು ಛಲಬಿಡದೆ ಆತ್ಮಸ್ಥೆರ್ಯೇ ದೊಂದಿಗೆ ದೇಶ ಸೇವೆ ಮಾಡಲು ಸೈನಿಕ ವೃತ್ತಿ ಆಯ್ಕೆ ಮಾಡಿಕೊಂಡಿರುವುದು ಸ್ವಾಗತ ಅರ್ಹ ಎಂದರು .
ತಾಯಿ ಭಾರತ ಮಾತೆಯ ರಕ್ಷಣೆ ಮಾಡಲು ಹೊರಟಿರುವ ವಿದ್ಯಾರ್ಥಿಗಳಾದ ಭಾನುಪ್ರಕಾಶ್, ಮುತ್ತುರಾಜ್,ಶ್ರೀಕಾಂತ್,ಬಾಲು,ಚಂದು ರವರಿಗೆ ಆ ಭಗವಂತ ಒಳ್ಳೇಯ ಸುಧೀರ್ಘ ಆರೋಗ್ಯ ಕೊಟ್ಟು ಶಕ್ತಿ ವೃದ್ದಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪ್ರೊಫೆಸರ್ ಶ್ರೀಕಾಂತ್, ಮೋನಿಕಾ, ದೈಹಿಕ ಶಿಕ್ಷಣ ನಿರ್ದೇಶಕರಾದ ಸತೀಶ್ ಹಾಗೂ ಎನ್ ಸಿ ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ವಿಷ್ಣು ಕೋಲಾರ